22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪಣೆಜಾಲು- ಗುಂಪಲಾಜೆ ಶ್ರೀ ನಾಗ-ರಕ್ತೇಶ್ವರಿ ಹಾಗೂ ಪರಿವಾರ ದೈವಗಳಿಗೆ ದೇವಸ್ಥಾನ, ಕಟ್ಟೆಗಳಿಗೆ ಶಿಲಾನ್ಯಾಸ ಕಾರ್ಯಕ್ರಮ

ಪಣೆಜಾಲು-ಗುಂಪಲಾಜೆ : ಓಡಿಲ್ನಾಳ ಗ್ರಾಮದ ನಾಗಚಾವಡಿ, ಗುಂಪಲಾಜೆ ಎಂಬಲ್ಲಿ ನಾಗ-ರಕ್ತೇಶ್ವರಿ ಹಾಗೂ ಪರಿವಾರ ದೈವಗಳಿಗೆ ದೇವಸ್ಥಾನ, ಕಟ್ಟೆಗಳಿಗೆ ವೈದಿಕ ವಿಧಿ-ವಿಧಾನಗಳೊಂದಿಗೆ, ಗಣ್ಯರ ಉಪಸ್ಥಿತಿಯಲ್ಲಿ “ಶಿಲಾನ್ಯಾಸ” ಕಾರ್ಯಕ್ರಮ ಯಶಸ್ವಿಯಾಗಿ ಜ.14 ರಂದು ನಡೆಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಧಾರ್ಮಿಕ ಮುಂದಾಳು, ಸಮಾಜಸೇವಕರು,ಕೊಡುಗೈ ದಾನಿಗಳಾದ ಶಶಿಧರ್ ಶೆಟ್ಟಿ ನವಶಕ್ತಿ, ಬರೋಡಾರವರು ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ಜನರು‌ ಭಕ್ತಿ, ಶ್ರದ್ದೆಯಿಂದ ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯದಲ್ಲಿ ಪಾಲ್ಗೊಲ್ಲಿ, ಎಲ್ಲಾರಿಗೂ ಈ ಅವಕಾಶ ಸಿಗೋದಿಲ್ಲ,ಸಿಕ್ಕಿದ್ದು ನಿಮ್ಮೆಲ್ಲರ ಸೌಭಾಗ್ಯ , ನನ್ನ ಕಡೆಯಿಂದಲೂ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿ ಶುಭ ಹಾರೈಸಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಾಗ-ರಕ್ತೇಶ್ವರಿ ಸೇವಾ ಟ್ರಸ್ಟ್ ನ ಅಧ್ಯಕ್ಷ, ಶಶಿರಾಜ್ ಶೆಟ್ಟಿಯವರು ಈ ಕ್ಷೇತ್ರ ಮುಂದಿನ ದಿನಗಳಲ್ಲಿ ಕಾರ್ಣಿಕದ ಕ್ಷೇತ್ರವಾಗಿ ನಮ್ಮ ಕಣ್ಣಾಮುಂದೆ ಬರಲಿದೆ..ಈ ಶುಭ ಕಾರ್ಯಕ್ಕೆ ಭಕ್ತಾದಿಗಳು ಸಾಮಾರ್ಥ್ಯಕನುಸಾರವಾಗಿ ದೇಣಿಗೆ ನೀಡುವುದರ ಮೂಲಕ ನಮ್ಮ ಜೋತೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.

ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಆನಂದ್ ಶೆಟ್ಟಿ ಐಸಿರಿಯವರು ಮಾತನಾಡಿ ಕಳೆದ ಎರಡು-ಮೂರು ವರ್ಷಗಳಿಂದ ಈ ಕ್ಷೇತ್ರದಲ್ಲಿ ಜೀರ್ಣೋದ್ಧಾರ ಕಾರ್ಯ ಮಾಡಬೇಕೆಂದು ಭಕ್ತಾದಿಗಳು ಇಟ್ಟಂತಹ ಕನಸು ಇಂದು ನೆರವೇರುತ್ತಿದೆ, ವಿವಿಧ ರೀತಿಯಲ್ಲಿ ಭಕ್ತರು ಜೊತೆಗೂಡಿ ಸಹಕಾರ ನೀಡಬೇಕೆಂದು ವಿಜ್ಞಾಪಣೆ ಮಾಡಿದರು.

ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜರು ಉಪಸ್ಥಿತರಿದ್ದು ಶುಭಹಾರೈಸಿದರು.

ವೇದಿಕೆಯಲ್ಲಿ ರಾಜು ಶೆಟ್ಟಿ ಬೇಂಗ್ಯತ್ಯಾರ್, ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಭಾರತಿ ಎಸ್ ಶೆಟ್ಟಿ ,ವಾಸ್ತುತಜ್ಞರಾದ ರತ್ನಾಕರ ಭಟ್ ಸರಪಾಡಿ-ಮದ್ದಡ್ಕ ,ಯತೀಶ್ ಕುಲಾಲ್ ಸಿರಿಮಜಲ್, ಕಿರಣ್ ಭಟ್ ಗುಂಪಲಾಜೆ, ಹಿರಿಯರಾದ ಎ.ಪೂವಪ್ಪ ಭಂಡಾರಿ,ಶಶಿಧರ ಶೆಟ್ಟಿ ,ಸಮಿತಿಯ ಪ್ರಧಾನ ಕಾರ್ಯದರ್ಶಿಯಾದ ಚಿದಾನಂದ ಇಡ್ಯ ,ಹಿರಿಯರಾದ ಶಂಕರ್ ಗಾಣಿಗ ಗುಂಪಲಾಜೆ ಉಪಸ್ಥಿತರಿದ್ದು ಶುಭ ಹಾರೈಸಿದರು.

ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ರಾಮ್ ಪ್ರಸಾದ್ ಎನ್.ಎಸ್, “ಸಮೃದ್ದಿ” ಗುಂಪಲಾಜೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಕೋಶಾಧಿಕಾರಿ ಪ್ರೇಮ್ ನಾಥ್ ಶೆಟ್ಟಿ, ರಂಜಿತ್ ಸಪಲ್ಯ, ಸತೀಶ್ ಗೌಡ, ಲೋಕೇಶ್ ಆಚಾರ್ಯ, ನೋಣಯ್ಯ ಗೌಡ, ಹರೀಶ್ ಗೌಡ, ಸತೀಶ್ ಕುಲಾಲ್ ನಾಗಚಾವಡಿ,ಶಶಿಧರ ಹೆಗ್ಡೆ, ಧನಂಜಯ ಶೆಟ್ಟಿ, ಚಂದ್ರಶೇಖರ ಕುಲಾಲ್, ಲೋಕೇಶ್ ಗೌಡ, ಶ್ರೀಮತಿ ಆಶಾ, ಶ್ರೀಮತಿ ಶಶಿಕಲಾ, ಶ್ರೀಮತಿ ನಳಿನಿ, ಶ್ರೀಮತಿ ರಮ್ಯ, ಶ್ರೀಮತಿ ಗೋಪಿಕಾ, ಶ್ರೀಮತಿ ದಿಶ್ಮಿತಾ , ಮುಂತಾದವರು ಕಾರ್ಯಕ್ರಮಕ್ಕೆ ಸಹಕರಿಸಿದರು.

Related posts

ವೆನ್ಲಾಕ್‌ ರಕ್ಷಾ ಸಮಿತಿ ಸಭೆಯಲ್ಲಿ ಕರೀಂ ಗೇರುಕಟ್ಟೆ, ಜಯರಾಮ ಭಾಗಿ

Suddi Udaya

ಕಲ್ಮಂಜ: ನಿಡಿಗಲ್ ನಿವಾಸಿ ಗಿರಿಜಾ ಮಡಿವಾಳ ನಿಧನ

Suddi Udaya

ಜೆಸಿಐ ಕೊಕ್ಕಡ ಕಪಿಲಾ ಘಟಕದ ಸಾಮಾನ್ಯ ಸಭೆ

Suddi Udaya

ಆಮಂತ್ರಣ ವೇದಿಕೆಯ ಅಧ್ಯಕ್ಷೆ ವಿದ್ಯಾಶ್ರೀ ಅಡೂರ್ ರವರ “ಕವಿತೆಯೆoಬ ಕೇದಗೆ” ಭಾವಗೀತೆಯ ಧ್ವನಿ ಮುದ್ರಣ ಬಿಡುಗಡೆ

Suddi Udaya

ಅಳದಂಗಡಿ: ಭಜನಾ ಸತ್ಸಂಗ ಕುಣಿತ ಭಜನೆ ಪೂರ್ವಭಾವಿ ಸಭೆ

Suddi Udaya

ಪಟ್ರಮೆ ಅನಾರು ಬೂತ್‌ಗೆ ಬಿಜೆಪಿ ಮಂಡಲದ ಅಧ್ಯಕ್ಷ ಶ್ರೀನಿವಾಸ ರಾವ್ ಭೇಟಿ

Suddi Udaya
error: Content is protected !!