25.5 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಎ.6 : ಇಳಂತಿಲ ವಾಣಿಶ್ರೀ ಗೆಳೆಯರ ಸಂಘದ 30ನೇ ವರ್ಷದ ವಾರ್ಷಿಕೋತ್ಸವ “ಇಳೋತ್ಸವ 2024” : ಪೂರ್ವಭಾವಿ ಸಭೆ, ಹಾಗೂ ನೂತನ ಸಮಿತಿ ರಚನೆ

ಇಳಂತಿಲ : ವಾಣಿಶ್ರೀ ಗೆಳೆಯರ ಬಳಗ ಸಂಘದ 30ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಎ.6 ರಂದು ನಡೆಯಲಿರುವ ಇಳಂತಿಲದ ಸಾಂಸ್ಕೃತಿಕ ಹಬ್ಬ “ಇಳೋತ್ಸವ 2024” ರ ಪೂರ್ವಭಾವಿ ಸಭೆಯು ಮಾ.1ರಂದು ವಾಣಿಶ್ರೀ ಭಜನಾ ಮಂದಿರ ವಾಣಿ ನಗರದಲ್ಲಿ ನಡೆಯಿತು.

ಕಾರ್ಯಕ್ರಮದ ಗೌರವ ಅಧ್ಯಕ್ಷರಾಗಿ ಬೆಂಗಳೂರಿನ ಯುವ ಉದ್ಯಮಿ ಕಿರಣ್ ಚಂದ್ರ ಆಯ್ಕೆಯಾದರು. ಕಾರ್ಯಕ್ರಮದ ಅಧ್ಯಕ್ಷರಾಗಿ ಇಳಂತಿಲದ ಅಶ್ವಿನಿ ಬ್ರಿಕ್ಸ್ ನ ಮಾಲಕರಾದ ಆಕಾಶ್ “ಅಶ್ವಿನಿ” ಅವರು ಆಯ್ಕೆಯಾದರು. ಕಾರ್ಯಾಧ್ಯಕ್ಷರಾಗಿ ವಾಣಿಶ್ರೀ ಗೆಳೆಯರ ಬಳಗದ ಅಧ್ಯಕ್ಷರಾಗಿ ಪ್ರೀತಮ್ ವಾಣೀನಗರ, ಉಪಾಧ್ಯಕ್ಷರಾಗಿ ಸಚಿನ್ ಪೆಲಪ್ಪಾರು ಶ್ರೀಮಾತಾ, ಮತ್ತು ಅಮೃತ್ ಕಲ್ಲಳಿಕೆ. ಕಾರ್ಯದರ್ಶಿಯಾಗಿ ಕವೀಶ್ ಶೆಟ್ಟಿ. ಜೊತೆ ಕಾರ್ಯದರ್ಶಿಯಾಗಿ ಮೋಕ್ಷಿತ್ ಮುರ , ಗಣೇಶ್ ಕಲ್ಚಾರ್. ಕೋಶಾಧಿಕಾರಿಗಳಾಗಿ ರಮೇಶ್ ಶ್ರೀ ದುರ್ಗಾ ಮತ್ತು ಉಮೇಶ್ ಗೌಡ ಕುಂಟಾಲ್ಕಟ್ಟೆ ಆಯ್ಕೆಯಾದರು.

ಗೌರವ ಸಲಹೆಗಾರರಾಗಿ ಜನಾರ್ದನ ಗೌಡ ಅಣ್ಣಾಜೆ , ರವಿ ಇಳಂತಿಲ, ಲಕ್ಷ್ಮೀಶ ಪಾಡೆಂಕಿ, ಕೆ ವಿ ಪ್ರಸಾದ್ ಭಟ್, ಶ್ರೀಮತಿ ಚಂದ್ರಿಕಾ ಭಟ್ , ತಿಮ್ಮಪ್ಪ ಗೌಡ ಕುಮೆರ್ಜಾಲ್, ವೆಂಕಟರಮಣ ಭಟ್ ಪೆಲಪ್ಪಾರು, ಗಣೇಶ್ ಭಟ್ ಮೂಡಾಜೆ, ಜಯಪ್ರಸಾದ್ ಕಡಮ್ಮಾಜೆ, ವಸಂತ ಶೆಟ್ಟಿ ಸಹಸ್ರ, ವಸಂತ ಜಿ ಸಾಲಿಯಾನ್, ಹರೀಶ್ ಗೌಡ ವಾಣೀನಗರ, ಸುಂದರ ಶೆಟ್ಟಿ ಎಂಜಿರಪಳಿಕೆ, ಪದ್ಮನಾಭ ಕುಂಬಾರ ಎಣ್ಮಾಡಿ , ಲಕ್ಮಣ ಮಿತ್ತಿಲ . ಪ್ರಚಾರ ಸಮಿತಿಯ ಸಂಚಾಲಕರಾಗಿ ಗಿರೀಶ್ ಅರ್ಬಿ, ಸ್ವಾಗತ ಸಮಿತಿಯ ಸಂಚಾಲಕರಾಗಿ ಜಗದೀಶ್ ಕಟ್ಟೆಚ್ಚಾರ್ ಮತ್ತು ಗಿರೀಶ್ ಇಳಂತಿಲ ಮಾರಾಟ ಮಳಿಗೆಯ ನಿರ್ವಹಣೆ ಉಮೇಶ್ ಪೂಜಾರಿ ಅಣ್ಣಾಜೆ ಮತ್ತು ಯತೀಶ್ ನೆಕ್ಕಾರೆ , ಅಲಂಕಾರ ಸಮಿತಿಯ ಸಂಚಾಲಕರಾಗಿ ಲಕ್ಷ್ಮೀಶ ಪಾಡೆಂಕಿ ಇವರೆಲ್ಲರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

Related posts

ಪೆರಾಲ್ದರಕಟ್ಟೆ ಮಸ್ಜಿದ್‌ನಲ್ಲಿ ಮಾದಕ ವ್ಯಸನ ಮತ್ತು ಮದುವೆ ಅನಾಚಾರ ಸಾಮಾಜಿಕ ಪಿಡುಗಿನ ವಿರುದ್ದ ಜಾಗೃತಿ ಸಭೆ

Suddi Udaya

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಕೊರಗಪ್ಪ ಗೌಡ ಮುಗೇರಡ್ಕ ರವರ ಚಿಕಿತ್ಸೆಗೆ ನೆರವಾಗಿ

Suddi Udaya

ಮಡಂತ್ಯಾರ್ ರೋಟರಿ ಕ್ಲಬ್ ವತಿಯಿಂದ ಸಾಲುಮರ ಸಾರ್ವಜನಿಕ ಬಸ್ ನಿಲ್ದಾಣ ಉದ್ಘಾಟನೆ

Suddi Udaya

ನಡ ಗ್ರಾ.ಪಂ.ನ ಪ್ರಥಮ ಸುತ್ತಿನ ಗ್ರಾಮಸಭೆ

Suddi Udaya

ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷರಾಗಿ ಸುನೀಲ್ ಕುಮಾರ್ , ಉಪಾಧ್ಯಕ್ಷರಾಗಿ ದಯಾನಂದ ಎಸ್

Suddi Udaya

ಮಾ.16: ಕನ್ಯಾಡಿ ಸೇವಾಭಾರತಿ 20ನೇ ವರ್ಷದ ಸಂಭ್ರಮ ಹಾಗೂ ರಕ್ತದಾನ ಶಿಬಿರ ಸಾಧನ ಸಲಕರಣೆಗಳ ವಿತರಣೆ , ಸಾಧಕರಿಗೆ ಗೌರವ ಸಮರ್ಪಣೆ ಮತ್ತು ನೂತನ ಟ್ರಸ್ಟಿಗಳ ಸೇರ್ಪಡೆ

Suddi Udaya
error: Content is protected !!