30.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಜೇನು ಕೃಷಿ ತರಬೇತಿ

ಬೆಳ್ತಂಗಡಿ: ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಆ.21, 22 ರಂದು ಎರಡು ದಿನಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಯ ರೈತರಿಗೆ ಹಮ್ಮಿಕೊಂಡಿದ್ದ ಜೇನು ಕೃಷಿ ಕುರಿತು ತರಬೇತಿಯಲ್ಲಿ ಆ.22 ರಂದು ಶ್ಯಾಮ್ ಸುಂದರ ಭಟ್ ಆಲಡ್ಕ ಬೆಳ್ತಂಗಡಿ ಇವರ “ಮಧುಮಕ್ಷಿಕ” ಎಂಬ ಹೆಸರಿನ ಜೇನು ಸಾಕಾಣಿಕಾ, ಸಂಸ್ಕರಣಾ ಘಟಕಕ್ಕೆ ಭೇಟಿ ಕೈಗೊಳ್ಳಲಾಯಿತು.

ಇವರು ತುಡುವೆ ಜೇನು, ನಸರಿ ಜೇನು ಮಾರಾಟದ ಜೊತೆಗೆ ಜೇನಿನ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದು ಯುವ ಜೇನು ಕೃಷಿಕರಿಗೆ ಮಾದರಿ ಆಗಿದ್ದಲ್ಲದೆ ಅನೇಕ ತರಬೇತಿಯನ್ನು ನೀಡಿದ್ದಾರೆ ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುತ್ತಾರೆ. ಇವರ ಜೇನಿನ ಮೌಲ್ಯ ವರ್ಧಿತ ಉತ್ಪನ್ನಗಳೆಂದರೆ ಜೇನುತುಪ್ಪದಿಂದ ತಯಾರಿಸಿದ ಲೇಹ್ಯ (ಮಧು ಕಲ್ಪ) ಸಿರಪ್ (ಮಧುಸಾರ), ಶರಬತ್ (ಮಧುಪೇಯರಸ), ಜೇನು, ನೆಲ್ಲಿಕಾಯಿ ಮತ್ತು ಬೆಲ್ಲ ಹಾಕಿ ಮಾಡಿರುವ ಎರಡು ರೀತಿಯ ಚಟ್ ಪಟ್ ಕ್ಯಾಂಡಿ, ಜೇನು ಮೇಣದ ಸೌಂದರ್ಯ ವರ್ಧಕ ಕ್ರೀಮ್ ಇತ್ಯಾದಿ. ಆಸಕ್ತರು ಅವರ ಜಾಲತಾಣ https://madhumakshika.com/ ಕೇ ಭೇಟಿ ನೀಡಬಹುದು.

ಪ್ರಭಾಕರ ಮಯ್ಯ ಪ್ರಗತಿಪರ ಕೃಷಿಕರು ಸುರ್ಯ, ನಡ ಗ್ರಾಮ ಬೆಳ್ತಂಗಡಿ ತಾ. ಇವರು ಪ್ರಾತ್ಯಕ್ಷಿಕೆ ವೇಳೆ ರೈತರಿಗೆ ಮಾಹಿತಿ ನೀಡಿದರು. ಹಾಗೂ ಬೆಳಿಗ್ಗಿನ ಅವಧಿಯಲ್ಲಿ ಮಲ್ಲಿಗೆ ಕೃಷಿ ಕುರಿತು ತರಬೇತಿ ನೀಡಿದರು. ಕೃಷಿ ಅಧಿಕಾರಿ ಗಣೇಶ್ ತರಬೇತಿಯನ್ನು ಆಯೋಜಿಸಿದ್ದರು.

Related posts

ಎಸ್ ಕೆ ಎಸ್ ಎಸ್‌ ಎಫ್ ಮದ್ದಡ್ಕ ಶಾಖೆಯ ವತಿಯಿಂದ ಕುವೆಟ್ಟು ಶಾಲಾ ವಿದ್ಯಾರ್ಥಿಗಳಿಗೆ ಟೈ ಮತ್ತು ಬೆಲ್ಟ್ ವಿತರಣೆ

Suddi Udaya

ತಣ್ಣೀರುಪಂಥ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಬಿಜೆಪಿ ಆಡಳಿತ: ಶಾಸಕ ಹರೀಶ್ ಪೂಂಜ ಸಂತಸ

Suddi Udaya

ಕಾಡಾನೆಗಳ ಹಾವಳಿ ತಡೆಗಟ್ಟುವ ಕುರಿತು ಮಾಹಿತಿ – ಪ್ರಾತ್ಯಕ್ಷಿಕೆ

Suddi Udaya

ಉರುವಾಲು ಪದವು ಅ.ಖಾ.ಹಿ.ಪ್ರಾ. ಶಾಲೆಯ ಶಾಲಾಡಳಿತ ಸಮಿತಿಯ ತಾರತಮ್ಯ ನೀತಿ ವಿರೋಧಿಸಿ ಪ್ರತಿಭಟನೆ ಹಾಗೂ ಕಾಲ್ನಡಿಗೆ ಜಾಥಾ

Suddi Udaya

ಬಳಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಂಪ್ಯೂಟರ್ ಕೊಠಡಿಗೆ ಶಿಲಾನ್ಯಾಸ

Suddi Udaya

ಬೆಳ್ತಂಗಡಿಯ ಪ್ರತಿಷ್ಠಿತ ಕೇದೆ ಗುತ್ತಿನ ಮನೆಗೆ ಭೇಟಿ ನೀಡಿದ ಕಾಂಗ್ರೆಸ್ ಅಭ್ಯರ್ಥಿ

Suddi Udaya
error: Content is protected !!