22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ಸಂಸ್ಕಾರ ಭಾರತಿ ಮತ್ತು ಹನುಮೋತ್ಸವ ಸಮಿತಿ ಅಳದಂಗಡಿ ವತಿಯಿಂದ ಹನುಮೋತ್ಸವದ ಪೂರ್ವಭಾವಿ ಸಭೆ

ಅಳದಂಗಡಿ : ಸಂಸ್ಕಾರ ಭಾರತಿ ಬೆಳ್ತಂಗಡಿ ಮತ್ತು ಹನುಮೋತ್ಸವ ಸಮಿತಿ ಅಳದಂಗಡಿ ವತಿಯಿಂದ ಪಿಲ್ಯ ಮಹಮ್ಮಾಯೀ ಭಜನಾ ಮಂದಿರದಲ್ಲಿ ಕಾರ್ಯಕ್ರಮದ ಯಶಸ್ವಿಗೆ ಪೂರ್ವಭಾವಿ ಸಭೆ ನಡೆಯಿತು. ನಾವರ ಪಿಲ್ಯ, ಸುಲ್ಕೇರಿ, ಕುದ್ಯಾಡಿ ಗ್ರಾಮದ ಉಸ್ತುವಾರಿಗಳ ಸಭೆಯನ್ನು ಕರೆಯಲಾಗಿತ್ತು.

ಸಭೆಯಲ್ಲಿ ಅಳದಂಗಡಿ ಶ್ರೀ ಕ್ಲಿನಿಕ್ ಇಲ್ಲಿಯ ಪ್ರಸಿದ್ಧ ವೈದ್ಯರಾದ ಡಾ.ಎನ್.ಎಮ್ ತುಳುಪುಳೆ ಎ. 12 ರಂದು ಅಳದಂಗಡಿಯಲ್ಲಿ ನಡೆಯುವ ಹನುಮೋತ್ಸವ 2025 ರ ಲಾಂಛನ ಬಿಡುಗಡೆ ಮಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಭಜನಾ ಮಂದಿರದ ಅರ್ಚಕರಾದ ಶೇಷಗಿರಿ ಭಟ್ ಕಾರ್ಯಕ್ರಮದ ಯಶಸ್ವಿಗಾಗಿ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಸಂಸ್ಕಾರ ಭಾರತಿ ತಾಲೂಕು ಅಧ್ಯಕ್ಷ ಸಂಪತ್ ಬಿ.ಸುವರ್ಣ ಹನುಮೋತ್ಸವದ ಬಗ್ಗೆ ಸವಿವರವಾದ ಮಾಹಿತಿ ನೀಡಿ ಸಂಪೂರ್ಣವಾಗಿ ಹನುಮೋತ್ಸವ ಯಶಸ್ವಿಯಾಗಲು ಪ್ರತೀ ಗ್ರಾಮದ ಹಿಂದೂ ಮನೆಗಳಿಗೂ ಆಮಂತ್ರಣ ಪತ್ರಿಕೆ ತಲುಪಿಸಬೇಕು ಮತ್ತು ಯಾಗದಲ್ಲಿ ವೃತಧಾರಿಗಳು ಭಾಗವಹಿಸುವಂತೆ ಮಾಡಬೇಕೆಂದು ಕೇಳಿಕೊಂಡರು.

ಸಮಾಲೋಚನಾ ಸಭೆಯಲ್ಲಿ ಸುಲ್ಕೇರಿ ಗ್ರಾ.ಪಂ‌.ಉಪಾಧ್ಯಕ್ಷ ಶುಭಕರ ಬಂಗೇರ ಸತೀಶ್ ಶಿರ್ಲಾಲು, ವಿಶ್ವನಾಥ ಬಂಗೇರ, ರಾಜೇಶ್ ಬುಣ್ಣಾನ್, ಉಮೇಶ್ ಸುವರ್ಣ, ಹರೀಶ್ ಕಲ್ಲಾಜೆ ಪ್ರಶಾಂತ ಕರಂಬಾರು, ಸುಮನಾಜ ಪಾಡಿಪಿಲ್ಯ, ಆನಂದ ಪೂಜಾರಿ ಮಣಿಕಂಠ, ಶೈಲೇಶ್ ಪಾಡಿಪಿಲ್ಯ, ಸುಧೀರ್ ಪಾಡಿಪಿಲ್ಯ, ಪುನೀತ್ ಬಂಗೇರ, ಉಮೇಶ್ ಬಂಗೇರ, ಸತೀಶ್ ಬಂಗೇರ ದುಗ್ಗಲಚ್ಚಿಲ್, ಅವಿನಾಶ್ ಪಂಚರತ್ನ ನಾರಾಯಣ ಪೂಜಾರಿ ಪರಾರಿ, ರವಿ ಪೂಜಾರಿ ನಾವರ, ರಮಾನಾಥ ಪಾದೆಮಾರಡ್ಡ, ಮುಂತಾದ ಪ್ರಮುಖರು ಭಾಗವಹಿಸಿದ್ದರು.

ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ನಾವರ ಸ್ವಾಗತಿಸಿ , ಸಂಚಾಲಕ ನಿತ್ಯಾನಂದ ಎನ್ ನಾವರ ಧನ್ಯವಾದ ಸಲ್ಲಿಸಿದರು.

Related posts

ಕುವೆಟ್ಟು ಸ. ಉ. ಹಿ. ಪ್ರಾ. ಶಾಲೆಯಲ್ಲಿ ಸರಕಾರ ನೀಡಿದ ಉಚಿತ ಪಾದರಕ್ಷೆ ವಿತರಣಾ ಸಮಾರಂಭ

Suddi Udaya

ರಾಜಕೇಸರಿ ಟ್ರಸ್ಟ್ ನಿಂದ ಸವಣಾಲು ಸ.ಹಿ.ಪ್ರಾ.ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್ ,ಪೆನ್ ವಿತರಣೆ

Suddi Udaya

ಪಟ್ರಮೆ: ಮೋನಮ್ಮ ನಿಧನ

Suddi Udaya

ರಸ್ತೆ ಬದಿ ನಿಂತಿದ್ದ ಮಹಿಳೆಗೆ ವ್ಯಾಗನರ್ ಡಿಕ್ಕಿ: ತಾ.ಪಂ ಮಾಜಿ ಸದಸ್ಯ ಗೋಪಿನಾಥ ನಾಯಕ್ ಅವರ ಪತ್ನಿ ಅಂಜಲಿ ನಾಯಕ್ ಗಂಭೀರ ಗಾಯ : ಮಂಗಳೂರು ಆಸ್ಪತ್ರೆಗೆ ದಾಖಲು

Suddi Udaya

ಪುತ್ತೂರು ನರಿಮೊಗರು ಕೊಡಿನೀರುನಲ್ಲಿ, ಮಾರುತಿ ಕಾರುಗಳ ನಡುವೆ ಅಪಘಾತ: ಕೊಕ್ಕಡದ ಮಹಿಳೆಗೆ ಗಾಯ ಆಸ್ಪತ್ರೆಗೆ ದಾಖಲು

Suddi Udaya

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಭಜನಾ ಸಮಿತಿಯಿಂದ ಕಜೆಕಾರು ಶ್ರೀ ಮಹಾದೇವ ದೇವೇಶ್ವರ ದೇವಸ್ಥಾನದಲ್ಲಿ ನೂತನ ಕುಣಿತ ಭಜನಾ ತರಬೇತಿ ಉದ್ಘಾಟನೆ

Suddi Udaya
error: Content is protected !!