July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ :ಎಸ್ ಡಿ ಎಂ ಪ. ಪೂ. ಕಾಲೇಜಿನ ಎನ್ಎಸ್ಎಸ್  ಸ್ವಯಂ ಸೇವಕರಿಗೆ  ಪುನಃಶ್ಚೇತನ ತರಬೇತಿ ಕಾರ್ಯಾಗಾರ.

ಉಜಿರೆ ಶ್ರೀ ಧ. ಮಂ. ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರಿಗೆ ಪುನಃಶ್ಚೇತನ ತರಬೇತಿ ಕಾರ್ಯಾಗಾರ ಕಾಲೇಜಿನ ರತ್ನತ್ರಯ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾದ ಎಸ್ ಡಿ ಎಂ ಪದವಿ ಕಾಲೇಜಿನ ವಾಣಿಜ್ಯ ಶಾಸ್ತ್ರ ಸಹಾಯಕ ಪ್ರಾಧ್ಯಾಪರಾದ  ಡಾ. ಲಕ್ಷ್ಮೀನಾರಾಯಣರವರು ಎನ್ ಎಸ್ ಎಸ್ ನ ಧ್ಯೇಯ,ಉದ್ದೇಶ ಕಾರ್ಯಕ್ರಮ ಮುಂತಾದ ವಿಷಯಗಳ ಕುರಿತು ತಿಳಿಸಿಕೊಟ್ಟರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ. ರಾಜೇಶ್ ಬಿ.ರವರು  ” ಎನ್ಎಸ್ಎಸ್ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಒಂದು ಅವಕಾಶವಾಗಿದ್ದು, ಸ್ವಯಂ ಸೇವಕರಾಗಿ  ಇಲ್ಲಿ ತಮ್ಮನ್ನು ಸರಿಯಾಗಿ  ತೊಡಗಿಸಿಕೊಂಡಾಗ ನಿಜವಾದ ವ್ಯಕ್ತಿತ್ವ ಮೂಡಿಸಿಕೊಳ್ಳಲು ಸಾಧ್ಯ “ಎಂದು ಹೇಳಿದರು.

ವೇದಿಕೆಯಲ್ಲಿ ಎನ್ಎಸ್ಎಸ್ ನಿಕಟಪೂರ್ವ ಯೋಜನಾಧಿಕಾರಿಗಳಾದ ಡಾ. ಪ್ರಸನ್ನ ಕುಮಾರ್ ಐತಾಳ್, ಯೋಜನಾಧಿಕಾರಿಗಳಾದ ವಿಶ್ವನಾಥ್  ಎಸ್., ಸಹಯೋಜನಾಧಿಕಾರಿ ಶೋಭಾ ಪಿ  ಉಪಸ್ಥಿತರಿದ್ದರು. 

ಸ್ವಯಂ ಸೇವಕಿ  ಮೌಲ್ಯ ಅತಿಥಿಗಳ ಪರಿಚಯಿಸಿದರು. ಸ್ವಯಂ ಸೇವಕರಾದ  ಸಂತೋಷ್ ನಿರೂಪಿಸಿ, ಸಂದೀಪ್ ಸ್ವಾಗತಿಸಿ ಸ್ವಯಂಸೇವಕಿ ಪಲ್ಲವಿ ವಂದಿಸಿದರು.

Related posts

ಲಾಯಿಲ ಕುಂಟಿನಿ ಭಾಗದಲ್ಲಿ ವೋಲ್ಟೇಜ್ ಸಮಸ್ಯೆ ಪರಿಹರಿಸಲು ಎಸ್‌ಡಿಪಿಐ ಮನವಿ

Suddi Udaya

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಬೆಳ್ತಂಗಡಿ ತಾಲೂಕು ಮಟ್ಟದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ

Suddi Udaya

ಅಳದಂಗಡಿ: ಬಡಗಕಾರಂದೂರು ನಿವಾಸಿ ಕೃಷ್ಣಪ್ಪ ಪೂಜಾರಿ ನಿಧನ

Suddi Udaya

ಗೋವಿಂದೂರು ಮಿತ್ರ ಬಳಗದ ಸದಸ್ಯರಿಂದ ಪಾರೆಂಕಿ ಅಭಿಲಾಷ್ ರವರಿಗೆ ಆರ್ಥಿಕ ನೆರವು

Suddi Udaya

ಧರ್ಮಸ್ಥಳ: ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

Suddi Udaya

ಕೊಕ್ಕಡ: ಕೃಷಿಕ ರುಕ್ಮಯ್ಯ ಗೌಡ ಪೂವಾಜೆ ನಿಧನ

Suddi Udaya
error: Content is protected !!