23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮಚ್ಚಿನ ಸ.ಉ.ಹಿ.ಪ್ರಾ. ಶಾಲೆಯಲ್ಲಿ ಶಾಲಾ ಸಂಸತ್ತಿನ ಪ್ರಮಾಣ ವಚನ

ಮಚ್ಚಿನ ಸ.ಉ.ಹಿ.ಪ್ರಾಥಮಿಕ ಶಾಲೆಯಲ್ಲಿ ಶಾಲಾ ಸಂಸತ್ತಿನ ಪ್ರಮಾಣ ವಚನ ಕಾರ‍್ಯಕ್ರಮ ನಡೆಯಿತು.

ಶಾಲಾ ಮುಖ್ಯಮಂತ್ರಿಯಾಗಿ ಆಯುಷ್ 8ನೇ ತರಗತಿ, ಉಪಮುಖ್ಯಮಂತ್ರಿಯಾಗಿ ರೋಹಿತ್ 8ನೇ ತರಗತಿ, ಕ್ರೀಡಾ ಮಂತ್ರಿಯಾಗಿ ಕೌಶಿಕ್ 8ನೇ ತರಗತಿ , ಗೃಹಮಂತ್ರಿಯಾಗಿ ಇಂಚರ 8ನೇ ತರಗತಿ, ಆಹಾರ ಮಂತ್ರಿ ಯಾಗಿ ತಕ್ಷಣ್ ೮ನೇ ತರಗತಿ, ನೀರಾವರಿ ಮಂತ್ರಿಯಾಗಿ ಉಲ್ಲಾಸ್ ೮ನೇ ತರಗತಿ ಕೃಷಿ ಮಂತ್ರಿ ಯಾಗಿ ರಿತೇಶ್ ೮ನೇ ತರಗತಿ, ಸ್ವಚ್ಛತಾ ಮಂತ್ರಿಯಾಗಿ ಸಾನ್ವಿ ಪ್ರಭು ೮ನೇ ತರಗತಿ , ಗ್ರಂಥಾಲಯ ಮಂತ್ರಿಯಾಗಿ ಹನೀಷಾ 8ನೇ ತರಗತಿ , ಆರೋಗ್ಯ ಮಂತ್ರಿಯಾಗಿ ಸ್ವಫೀನಾ ೮ನೇ ತರಗತಿ , ಶಿಸ್ತುಮಂತ್ರಿಯಾಗಿ ವಂಶಿಕಾ 8ನೇ ತರಗತಿ ಶಿಕ್ಷಣ ಮಂತ್ರಿ ಯಾಗಿ ಅಲ್ಫಾನ ೮ನೇ ತರಗತಿ , ಸ್ಪೀಕರ್ ಆಗಿ ಸಾನ್ವಿ ೮ನೇ ತರಗತಿ ಇವರು ಪ್ರಮಾಣ ವಚನ ಸ್ವೀಕರಿಸಿದರು.

ಎಸ್ ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು ನೂತನ ಮಂತ್ರಿ ಮಂಡಲಕ್ಕೆ ಶುಭಹಾರೈಸಿದರು. ಜಿಪಿಟಿ ಶಿಕ್ಷಕಿ ದಿವ್ಯಾ ಎಚ್. ಎ. ನಿರೂಪಿಸಿ ಮಾರ್ಗದರ್ಶನ ನೀಡಿದರು. ಜಿಪಿಟಿ ಶಿಕ್ಷಕಿಯಾದ ರಮಾದೇವಿ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಶಾಲಾ ಶಿಕ್ಷಕಿಯಾದ ಅಶ್ವಿನಿ ಸ್ವಾಗತಿಸಿ ತುಳಸಿ ಧನ್ಯವಾದವಿತ್ತರು.

Related posts

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ದೇವರ ಪ್ರತಿಷ್ಠಾ ವರ್ಧಂತಿ

Suddi Udaya

ಕೊಕ್ಕಡ: ಶ್ರೀ ಪಿಲಿಚಾಮುಂಡಿ ಹಾಗೂ ಸಹ ಪರಿವಾರ ದೈವಗಳ ನೇಮೋತ್ಸವ

Suddi Udaya

ಪಡಂಗಡಿ ರಸ್ತೆಯ ಗುಂಡಿಗಳನ್ನು ಸಿಮೆಂಟ್ ವೆಟ್ ಮಿಕ್ಸ್ ಹಾಕಿ ದುರಸ್ಥಿ

Suddi Udaya

ಬಳಂಜ: ಶ್ರೀ ಶಾರದೋತ್ಸವದ ಅಂಗವಾಗಿ ವಾಲಿಬಾಲ್ ಪಂದ್ಯಾಟ, ಯುವ ಉದ್ಯಮಿ ರಾಕೇಶ್ ಹೆಗ್ಡೆಯವರಿಂದ ಕ್ರೀಡಾಂಗಣ ಉದ್ಘಾಟನೆ

Suddi Udaya

ವಾಣಿಜ್ಯ ಕೈಗಾರಿಕೆ ಮತ್ತು ಸೇವಾ ಉದ್ಯಮದಾರರ ಸಂಘ ಮಡಂತ್ಯಾರು ಪುಂಜಾಲಕಟ್ಟೆ ಇವರ ನೇತೃತ್ವದಲ್ಲಿ ಹೆದ್ದಾರಿ ಕಾಮಗಾರಿ ಅವ್ಯವಸ್ಥೆ ಕುರಿತು ಸಮಾಲೋಚನಾ ಸಭೆ

Suddi Udaya

ಲೋಕಸಭಾ ಚುನಾವಣೆಯಲ್ಲಿ ಕೆ. ಆರ್.ಎಸ್. ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಮಹೇಶ್ ಶೆಟ್ಟಿ ತಿಮರೋಡಿ ರವರಿಗೆ ಮನವಿ

Suddi Udaya
error: Content is protected !!