23.5 C
ಪುತ್ತೂರು, ಬೆಳ್ತಂಗಡಿ
June 8, 2026
ಅಪರಾಧ ಸುದ್ದಿ

ಹೊಸಂಗಡಿ ತೊರ್ಪೆ ಡ್ಯಾಂ ಬಳಿ ನದಿಯಲ್ಲಿ ಕಾರ್ಕಳ ಮಿಯಾರು ನಿವಾಸಿ ಯತೀಶ್ ಪೂಜಾರಿ ಶವ ಪತ್ತೆ : ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಕುಟುಂಬಸ್ಥರಿಂದ ಪೊಲೀಸರಿಗೆ ದೂರು

ಬೆಳ್ತಂಗಡಿ: ಪತ್ನಿ ಮತ್ತು ಆಕೆಯ ಮನೆಯವರ ನಡುವೆ ಗಲಾಟೆ ನಡೆದ ಬಳಿಕ ವ್ಯಕ್ತಿಯೋವ೯ನ ಶವ ನದಿ ನೀರಿನಲ್ಲಿ ಪತ್ತೆಯಾಗಿದ್ದು, ಆತನ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಮನೆಯವರು ಪೊಲೀಸರಿಗೆ ದೂರು ನೀಡಿದ ಘಟನೆ ಡಿ.24ರಂದು ವರದಿಯಾಗಿದೆ.

ಕಾರ್ಕಳ ತಾಲೂಕು ಮಿಯಾರು ಗ್ರಾಮದ ಬೈದರ್ಲಬೆಟ್ಟು ಮನೆ ನಿವಾಸಿ
ಯತೀಶ್ ಪೂಜಾರಿ(41) ನದಿಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದವರಾಗಿದ್ದಾರೆ.

ಪ್ರಕರಣದ ಹಿನ್ನೆಲೆ : ಯತೀಶ್‌ ಪೂಜಾರಿ ಎಂಬವರು ಸುಮಾರು 15 ವರ್ಷಗಳ ಹಿಂದೆ ಹೊಸಂಗಡಿ ಗ್ರಾಮ ಪೆರಿಂಜೆ ಸುಜಯ ಎಂಬವರೊಂದಿಗೆ ವಿವಾಹವಾಗಿದ್ದು, ಎರಡು ಗಂಡು ಮಕ್ಕಳಿದ್ದಾರೆ .
ಯತೀಶ ಮದುವೆಯಾದ ಬಳಿಕ ಹೆಂಡತಿ ಮನೆಯ ಬಳಿಯಲ್ಲೇ ಪ್ರತ್ಯೇಕ ಮನೆ ಮಾಡಿ ವಾಸವಿದ್ದವನು, ಸುಮಾರು ಒಂದೂವರೆ ವರ್ಷದ ಹಿಂದೆ ಗಂಡ ಹೆಂಡತಿ ಮಧ್ಯೆ ಕೌಟುಂಬಿಕ ಮನಸ್ತಾಪ ಉಂಟಾಗಿ ಯತೀಶ್‌ ಮನೆ ಬಿಟ್ಟು ತನ್ನ ಅಕ್ಕನ ಮನೆಯಲ್ಲಿದ್ದ. ಬಳಿಕ ವಿದೇಶಕ್ಕೆ ಹೋಗಿದ್ದು, ಇತ್ತೀಚೆಗೆ ಸುಮಾರು 20 ದಿನಗಳ ಹಿಂದೆ ವಿದೇಶದಿಂದ ಬಂದು ತನ್ನ ಅಕ್ಕನ ಮನೆಯಲ್ಲಿದ್ದವನು, ಒಂದು ವಾರದ ಹಿಂದೆ ಮುಡಿಪು ಎಂಬಲ್ಲಿ ಹೋಟೇಲ್‌ ಕೆಲಸಕ್ಕೆ ಸೇರಿಕೊಂಡಿದ್ದನು. ಈ ನಡುವೆ ಹೆಂಡತಿಯೊಂದಿಗೆ ದೂರವಾಣಿ ಮೂಲಕ ಜಗಳವಾಡಿ ಡಿ.22 ರಂದು ಹೆಂಡತಿಯ ಮನೆಯಾದ ಹೊಸಂಗಡಿ ಗ್ರಾಮದ ಪೆರಿಂಜೆಗೆ ಬಂದು ಹೆಂಡತಿ ಹಾಗೂ ಅವರ ಮನೆಯವರೊಂದಿಗೆ ಜಗಳವಾಡಿ ಬಳಿಕ ಸಂಜೆ ಸುಮಾರು 4 ಗಂಟೆಗೆ ಅಲ್ಲಿಂದ ಹೋಗಿದ್ದ ಎನ್ನಲಾಗಿದೆ. ಇದಾದ ಬಳಿಕ ಡಿ. 24 ರಂದು ಸಂಜೆ ಯತೀಶ್‌ ಪೂಜಾರಿಯ ಮೃತದೇಹವು ಹೊಸಂಗಡಿ ತೊರ್ಪೆ ಡ್ಯಾಂ ಬಳಿ ನದಿ ನೀರಿನಲ್ಲಿ
ಪತ್ತೆಯಾಗಿದ್ದು, ಯತೀಶ್‌ ಪೂಜಾರಿಯು ಡಿ. 22ರಂದು ತನ್ನ ಹೆಂಡತಿ ಮನೆಯಲ್ಲಿ ಜಗಳವಾಡಿ ಹೋದವನು ಹೊಸಂಗಡಿ ಗ್ರಾಮದ ಪೇರಿ ಎಂಬಲ್ಲಿ ತೋರ್ಪೆ ಡ್ಯಾಂ ಬಳಿ ಫಲ್ಗುಣಿ ನದಿ ನೀರಿಗೆ ಆಕಸ್ಮಿಕವಾಗಿ ಬಿದ್ದು ಅಥವಾ ನದಿನೀರಿಗೆ ಹಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಸಾಧ್ಯತೆಯಿದ್ದರೂ, ಯತೀಶ್‌ ಪೂಜಾರಿಗೂ ಆತನ ಹೆಂಡತಿ ಮನೆಯವರಿಗೂ ಗಲಾಟೆ ನಡೆದ ಬಳಿಕ ನದಿ ನೀರಿನಲ್ಲಿ ಬಿದ್ದು ಮೃತಪಟ್ಟಿರುವುದರಿಂದ ಈತನ ಮರಣದಲ್ಲಿ ಸಂಶಯವಿದ್ದು, ಸೂಕ್ತ ತನಿಖೆ ನಡೆಸುವಂತೆ ಆತನ ಸಹೋದರ ಕಿಶೋರ್ ಕೋಟ್ಯಾನ್ ವೇಣೂರು ಠಾಣೆಗೆ ದೂರು ನೀಡಿದ್ದಾರೆ. ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಉಜಿರೆ : ಅಕ್ರಮ ಮದ್ಯ ಮಾರಾಟ: ವಾಹನ ಸಹಿತ ರೂ. 1.53 ಲಕ್ಷದ ಮದ್ಯ ವಶ

Suddi Udaya

ಯೂಟ್ಯೂಬರ್ಸ್ ಹಾಗೂ ಖಾಸಗಿ ಚಾನೆಲ್ ವರದಿಗಾರನ ಮೇಲೆ ಹಲ್ಲೆ ಆರೋಪ: ಸ್ಥಳದಲ್ಲಿ ಜನ ಜಮಾಯಿಸಿ ಉದ್ವಿಗ್ನ ಸ್ಥಿತಿ- ಪೊಲೀಸರಿಂದ ಲಾಠಿ ಚಾರ್ಜ್. ಸ್ಥಳದಲ್ಲಿ ಪರಿಸ್ಥಿತಿ ಪ್ರಸ್ತುತ ಶಾಂತವಾಗಿದ್ದು, ಪ್ರಕರಣ ದಾಖಲಿಸಲಾಗುತ್ತಿದೆ: ಎಸ್.ಪಿ

Suddi Udaya

ಬಹುನಿರೀಕ್ಷಿತ ರಾನಿ ಚಲನಚಿತ್ರದ ನಾಯಕ ನಟ ಗಂಭೀರ ಗಾಯ: ಕಾರ್ಯಕಾರಿ ನಿರ್ಮಾಪಕ ಕೊಕ್ರಾಡಿಯ ಗಿರೀಶ್ ಹೆಗ್ಡೆ ಅದೃಷ್ಟವಶಾತ್ ಪಾರು

Suddi Udaya

ಟ್ಯಾಂಕರ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಪುದುವೆಟ್ಟಿನ ಯುವಕ ಚಿಕಿತ್ಸೆ ಫಲಕಾರಿಯಾಗದೇ ಮೃತ್ಯು

Suddi Udaya

ಕೊಕ್ಕಡ: ಸರ್ವಿಸ್ ಸ್ಟೇಷನ್ ಮಾಲಕ ಶಾಂತಪ್ಪ ಗೌಡ ಆತ್ಮಹತ್ಯೆ

Suddi Udaya

ನೇಣುಬಿಗಿದು ಯುವಕ ಆತ್ಮಹತ್ಯೆಗೆ ಶರಣು: ವಿಷಯ ತಿಳಿದು ತಂದೆ ಕೂಡ ಆತ್ಮಹತ್ಯೆ ಪ್ರಯತ್ನ

Suddi Udaya
error: Content is protected !!