ಬೆಳ್ತಂಗಡಿ: ಕಳೆದ 35 ವರ್ಷಗಳಿಂದ ಬೆಳ್ತಂಗಡಿ ನಗರದಲ್ಲಿ ಕಾರ್ಯಾಚರಿಸುತ್ತಿದ್ದ “ಸಮಡೈನ್” ಸಂಸ್ಥೆಯ ನೂತನ ಹೊಟೇಲ್ ಏ.9 ರಂದು ಬೆಳ್ತಂಗಡಿ ಸುವರ್ಣ ಆರ್ಕೆಡ್ ಕಟ್ಟಡದಲ್ಲಿ ಉದ್ಘಾಟನೆಗೊಂಡಿತು.
ಪೂರ್ವಾಹ್ನ ಧಾರ್ಮಿಕ ಕಾರ್ಯಕ್ರಮಗಳು ನಡೆದು ಸಯ್ಯಿದ್ ಎಸ್.ಎಂ ಕೋಯ ತಂಙಳ್ ಶುಭಾಶೀರ್ವಾದ ನೀಡಿದರು.
ಈ ವೇಳೆ ಹನೀಫ್ ಮುಸ್ಲಿಯಾರ್ ನಿಡಿಗಲ್, ಮುಹ್ಯುದ್ದೀನ್ ಉಜಿರೆ, ಯು. ಹೈದರ್ ಮದನಿ ಉಜಿರೆ, ಇಸ್ಮಾಯಿಲ್ ಸಖಾಫಿ ಡಿ.ಹೆಚ್ ಮಾಚಾರ್, ಹನೀಫ್ ಫೈಝಿ ಬೆಳ್ತಂಗಡಿ, ಮುಹಮ್ಮದ್ ನೌಶಾದ್ ಸಖಾಫಿ ಮಲೆಬೆಟ್ಟು, ಸಿದ್ದೀಕ್ ಮದನಿ, ಫಾರೂಕ್ ಮದನಿ ಪುತ್ತೂರು ಮೊದಲಾದವರು ಉಪಸ್ಥಿತರಿದ್ದರು.

ಬಳಿಕ ಸುವರ್ಣ ಆರ್ಕೆಡ್ ಮಾಲಕ ನಾಣ್ಯಪ್ಪ ಪೂಜಾರಿ ರಿಬ್ಬನ್ ಕತ್ತರಿಸಿ ನೂತನ ಹೊಟೇಲ್ ಕೇಂದ್ರವನ್ನು ಉದ್ಘಾಟಿಸಿದರು. ಈ ಸಂದರ್ಭ ಬೆಳ್ತಂಗಡಿ ವರ್ತಕರ ಸಂಘದ ಅಧ್ಯಕ್ಷ ರೊನಾಲ್ಡ್ ಲೋಬೋ, ಇಬ್ರಾಹಿಂ ಸಖಾಫಿ ಕಬಕ, ಸಾದಿಕ್ ಮಾಸ್ಡರ್ ಮಲೆಬೆಟ್ಟು, ಅನ್ವರ್ ಅಲಿ ಬೆಳ್ತಂಗಡಿ, ಸಿರಾಜ್ ಜೈಭಾರತ್ ಪುತ್ರಬೈಲು, ಅಶ್ರಫ್ ಆಲಿಕುಂಞಿ ಮುಂಡಾಜೆ, ಎನ್ ಉಸ್ಮಾನ್ ಪಣಕಜೆ, ಹೈದರ್ ಇಸ್ಮಾಯಿಲ್ ಮಲೆಬೆಟ್ಟು, ಪ್ರವೀಣ್ ಭಂಡಾರಿ ಬೆಳ್ತಂಗಡಿ, ಅನ್ಸಾರ್ ಮಲೆಬೆಟ್ಟು, ಹರೀಶ್ ಲಾಯಿಲ ಆದರ್ಶನಗರ ಮೊದಲಾದವರು ಉಪಸ್ಥಿತರಿದ್ದರು.
ಸಂಸ್ಥೆಯ ಮಾಲಿಕ ಅಬೂಬಕ್ಕರ್, ಅವರ ತಂದೆ ಹಮೀದ್ ಮಲೆಬೆಟ್ಟು, ಮಕ್ಕಳಾದ ಫಝಲ್, ಮುಝಮ್ಮಿಲ್, ರಸಿಲ್ ಇವರು ಆಹ್ವಾನಿತರನ್ನು ಬರಮಾಡಿಕೊಂಡು ಗೌರವಿಸಿದರು.












