ಕೊಕ್ಕಡ: ಹಳ್ಳಿಂಗೇರಿ ಸರಕಾರಿ ಶಾಲಾ ಬಾವಿಯು ಬಲ್ಲೆ ಹಾಗೂ ಕೆಸರಿನಿಂದ ತುಂಬಿದ್ದು , ಸ್ವಚ್ಚಗೊಳಿಸಿಕೊಡುವ ಬಗ್ಗೆ ಶಾಲಾ ಮುಖ್ಯಶಿಕ್ಷಕ ಶ್ರೀಧರ ಕೆ ಎಸ್ ಅವರ ವಿನಂತಿಯ ಮೇರೆಗೆ ಎ.5ರಂದು ಕೊಕ್ಕಡದ ಡಿವೈಎಫ್ಐ ತಂಡ ಶ್ರಮದಾನದ ಮೂಲಕ ಬಾವಿಯನ್ನು ಸ್ವಚ್ಚಗೊಳಿಸಿಕೊಟ್ಟಿರುತ್ತಾರೆ.
ಅಗತ್ಯ ಪರಿಕರಗಳನ್ನು ಬಾಬು ಮರುವಂತಿಲ, ಚಂದ್ರಶೇಖರ ಗೌಡ ಅನಾರು ಒದಗಿಸಿದ್ದರು. ಶ್ರಮದಾನಿಗಳಾಗಿ ಬಾಬು ಮರುವಂತಿಲ, ಬಾಬು ಬಾಂತಿಮಾರು, ಮಾಧವ ಅಡ್ಯೈ, ಗುರುಪ್ರಸಾದ್ ಅಡ್ಯೈ, ರಾಘವ ಅಡ್ಯೈ ಕಾರ್ಯನಿರ್ವಹಿಸಿ ಬಾವಿ ಸ್ವಚ್ಚಗೊಳಿಸಿಕೊಟ್ಟರು.
ಇನ್ಸ್ಪೈರ್ ಸ್ಪೋರ್ಟ್ಸ್ ಕ್ಲಬ್ ಕೊಕ್ಕಡ ಇವರು ಶ್ರಮದಾನಿಗಳಿಗೆ ತಂಪು ಪಾನೀಯ, ಐಸ್ ಕ್ರೀಂ ಒದಗಿಸಿದರು. ಶ್ರೀಧರ್ ಕೆ ಎಸ್ ಉಪಾಹಾರವನ್ನು ಒದಗಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಶ್ರೀಧರ್ ಕೆ ಎಸ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನವಾಜ್ ಎನ್.ಎಸ್, ಮಾಜಿ ಅಧ್ಯಕ್ಷ ಉಮ್ಮರ್ ಬೈಲಂಗಡಿ, ಶ್ಯಾಮರಾಜ್ ಪಟ್ರಮೆ, ಅನ್ಸಾರ್ ಹಳ್ಳಿಂಗೇರಿ ಮೊದಲಾದವರು ಉಪಸ್ಥಿತರಿದ್ದು ಸಹಕಾರ ನೀಡಿದರು.












