ಬೆಳ್ತಂಗಡಿ: ಲಾಯಿಲ ಗ್ರಾಮದ ಟಿ. ಬಿ. ಕ್ರಾಸ್ ಎಂಬಲ್ಲಿ ಅಕ್ರಮ ಕಸ ವಿಲೇವಾರಿ ಮಾಡುತ್ತಿರುವ ಬಗ್ಗೆ ಗ್ರಾಮ ಪಂಚಾಯತ್ ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಾರಾನಾಥ ನಾಯ್ಕ, ಪಂಚಾಯತ್ ಲೆಕ್ಕ ಸಹಾಯಕಿ ಸುಪ್ರಿತಾ ಶೆಟ್ಟಿ ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳೊಂದಿಗೆ ಸ್ವಚ್ಛತಾ ಸಿಬ್ಬಂದಿ ವರ್ಗದವರೊಂದಿಗೆ ದಿಢೀರ್ ಸ್ಥಳ ಭೇಟಿ ನೀಡಿ ಸಂಬಂಧಪಟ್ಟವರ ಮಾಹಿತಿ ಪಡೆದುಕೊಂಡು ಕಸ ರಸ್ತೆ ಬದಿ ಎಸಗಿದವರಿಗೆ ತಕ್ಷಣ ದೂರವಾಣಿ ಕರೆಯ ಮೂಲಕ ಸ್ಥಳಕ್ಕೆ ಬರಲು ಹೇಳಿ ಸೂಕ್ತ ಮಾಹಿತಿಯೊಂದಿಗೆ 2000 ದಂಡನೆಯನ್ನು ವಸೂಲಿ ಮಾಡಿ ಕಸ ಬಿಸಾಡದಂತೆ ಎಚ್ಚರಿಕೆ ನೀಡಲಾಯಿತು.






