22.6 C
ಪುತ್ತೂರು, ಬೆಳ್ತಂಗಡಿ
July 23, 2026
ಅಭಿನಂದನೆಗ್ರಾಮಾಂತರ ಸುದ್ದಿವರದಿ

ಗುರುವಾಯನಕೆರೆ ಶ್ರೀ ವೇದವ್ಯಾಸ ಶಿಶುಮಂದಿರದ ವಾರ್ಷಿಕೋತ್ಸವ-ಶಿಶು ಸಂಭ್ರಮ

ಗುರುವಾಯನಕೆರೆ: ಶ್ರೀ ವೇದವ್ಯಾಸ ಶಿಶುಮಂದಿರ ಶಿವಾಜಿನಗರ ಇದರ ವಾರ್ಷಿಕೋತ್ಸವ ಹಾಗೂ ಶಿಶು ಸಂಭ್ರಮ ಕಾರ್ಯಕ್ರಮವು ಏ.೧೧ ರಂದು ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಮಾತನಾಡುತ್ತಾ ಪ್ರಪಂಚದ ದೇವರ ಕೋಣೆ ಭಾರತ ದೇಶವಾದರೆ ಭಾರತದ ದೇವರ ಕೋಣೆ ನಮ್ಮ ತುಳುನಾಡು. ಈ ತುಳುನಾಡಿನಲ್ಲಿ ಭಾರತೀಯ ಸಂಸ್ಕೃತಿಯನ್ನು ಹೇಳಿಕೊಡುವ ನಮ್ಮ ಶಿಶುಮಂದಿರಗಳು ಬಹಳ ಮುಖ್ಯ ಪಾತ್ರ ವಹಿಸುತ್ತದೆ ಎಂದರು.

ಶಿವಪ್ರಸಾದ್ ಮಲೆಬೆಟ್ಟು ರವರು ಬೌಧಿಕ್ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕೆನರಾ ಸ್ಟೀಲ್ ಇಂಡಸ್ಟ್ರಿಸ್ ನ ಮಾಲಕ ವಿನಯಚಂದ್ರ, ರಕ್ಷಿತಾ ಶಿವಪ್ರಸಾದ್ ಶೆಟ್ಟಿ ಶುಭ ಹಾರೈಸಿದರು. ಶಿಶುಮಂದಿರದ ಅಧ್ಯಕ್ಷೆ ಇಂದುಮತಿ ಅವರು, ಶಿಶು ಮಂದಿರದ ಅಭಿವೃದ್ಧಿಗೆ ಇನ್ನಷ್ಟು ವಿಸ್ತರಿತ ಕಟ್ಟಡ ಹೊರಾಂಗಣ ಆಟಗಳು, ಕೆಲವೊಂದು ಮೂಲಭೂತ ಸೌಕರ್ಯಗಳ ಅಗತ್ಯವಿದ್ದು ಸಹಕಾರ ಕೋರಿದರು. ಮಾತೃ ಮಂಡಳಿ ಅಧ್ಯಕ್ಷೆ ಮಮಿತಾ ಸುಧೀರ್ ಮಾತನಾಡಿ, ಮನೆಯಲ್ಲಿ ನಾವು ಮಕ್ಕಳಿಗೆ ಹೇಳಿಕೊಡುವಂತೆ ಅತ್ಯಂತ ಪ್ರೀತಿ ಮಮತೆಯಿಂದ ಮಾತಾಜಿಗಳು ಇಲ್ಲಿ ಎಲ್ಲಾ ವಿಚಾರಗಳನ್ನು ಮಕ್ಕಳಿಗೆ ಹೇಳಿಕೊಳ್ಳುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಶಿಶುಮಂದಿರದ ಹಳೆ ವಿದ್ಯಾರ್ಥಿಗಳಾದ ಕ್ರೀಡಾ ಕ್ಷೇತ್ರದಲ್ಲಿ ಸಾಧಾರಣ ಮಾಡಿದ ಗೌತಮ್, ಪಿಯುಸಿಯಲ್ಲಿ ರಾಜ್ಯಕ್ಕೆ ೭ನೇ ರ‍್ಯಾಂಕ್ ಪಡೆದ ಸಂಜನಾ ಪೈ,ಶಿಶುಮಂದಿರದಲ್ಲಿ ಮೂರು ವರ್ಷಗಳ ಕಾಲ ಮಾತಾಜಿಯಾಗಿ ಸೇವೆ ಸಲ್ಲಿಸಿದ ಅಶ್ವಿನಿ ಹಾಗೂ ಮಕ್ಕಳಿಗೆ ಉಚಿತವಾಗಿ ನೃತ್ಯಭ್ಯಾಸವನ್ನು ಮಾಡಿಸಿದ ವಿನಿತಾ ಜೋಗಿತಾಯ ಅವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.

ಸನ್ಮಾನಿತರ ಪರಿಚಯವನ್ನು ರಚನಾ ಕಾಶಿನಾಥ್ ಮತ್ತು ರತ್ನಾಕರ ರಾವ್ ಓದಿದರು. ಶಿಶು ಮಂದಿರದ ಮಕ್ಕಳ ಪೋಷಕರಲ್ಲಿ ಓರ್ವರಾದ ಪುರಂದರ ಇವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಶಿಶುಮಂದಿರದ ಪುಟಾಣಿಗಳಿಗೆ ಹಾಗೂ ಮಾತೃ ಮಂಡಳಿಯ ಸದಸ್ಯರಿಗೆ ನಡೆದ ಸ್ಪರ್ಧೆಗಳ ಬಹುಮಾನ ವಿತರಣೆ, ಮಾಡಲಾಯಿತು. ಸಭಾ ಕಾರ್ಯಕ್ರಮದ ಮೊದಲು ನಡೆದ ಶಿಶು ಮಂದಿರದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ಲೋಕ, ಇಂದಿನ ಪಂಚಾAಗ, ಮಂಕುತಿಮ್ಮನ ಕಗ್ಗ, ಕುಣಿತ ಭಜನೆ, ಕಬೀರನ ದೋಹೆ ಇತ್ಯಾದಿಗಳನ್ನು ಮಕ್ಕಳು ನಡೆಸಿಕೊಟ್ಟರು.

ಈ ಕಾರ್ಯಕ್ರಮವನ್ನು ಮಾತೃ ಮಂಡಳಿಯ ಶ್ರೇಯ ಇವರು ನಡೆಸಿಕೊಟ್ಟರು. ಶಿಶುಮಂದಿರದ ಪುಟಾಣಿಗಳು ಬಾಲ ಗೋಕುಲದ ಮಕ್ಕಳು, ಮಾತಾಜಿಯವರು ಹಾಗೂ ಮಾತೃ ಮಂಡಳಿ ಸದಸ್ಯರಿಂದ ವಿವಿಧ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಿಶುಮಂದಿರದ ಕೋಶಾಧಿಕಾರಿ ಪ್ರಿಯದರ್ಶಿನಿ ಸ್ವಾಗತಿಸಿದರು. ರಾಮಚಂದ್ರ ಶೆಟ್ಟಿ ವಂದಿಸಿದರು. ಸೋಮಶೇಖರ್ ದೇವಸ್ಯ, ವಸಂತ ಗೌಡ, ಬಾಲಕೃಷ್ಣ ಆಚಾರ್ಯ, ಹೇಮಂತ ಶೆಟ್ಟಿ ದೇವಸ್ಯ, ಮಕ್ಕಳ ಪೋಷಕರು, ಮಾತಾಜಿಗಳಾದ ರಮ್ಯಾ, ಜಯಶ್ರೀ, ಅಶ್ವಿನಿ ಕಾರ್ಯಕ್ರಮಕ್ಕೆ ಸಹಕರಿಸಿದರು. ಮಂಗಳ ರತ್ನಾಕರ ಮತ್ತು ಸುಧಾಮಣಿ ಆರ್ ನಿರೂಪಿಸಿದರು.

Related posts

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಭೇಟಿ

Suddi Udaya

ಮೇ 27: ಬೆಳ್ತಂಗಡಿ ತಾಲೂಕಿನ ವಿವಿಧೆಡೆ ವಿದ್ಯುತ್ ನಿಲುಗಡೆ

Suddi Udaya

ಕಡಿರುದ್ಯಾವರದಲ್ಲಿ ಗಾಳಿ ಮಳೆಗೆ ಮನೆಯ ಮೇಲೆ ಬಿದ್ದ ಬೃಹದಾಕಾರದ ಮರ: ವಾಸ್ತವ್ಯದ ಮನೆಗೆ ಭಾಗಶಃ ಹಾನಿ, ಮನೆಯಲ್ಲಿದ್ದವರು ಪ್ರಾಣಪಾಯದಿಂದ ಪಾರು

Suddi Udaya

ಧಮ೯ಸ್ಥಳ ಮೃತದೇಹ ಹೂತು ಹಾಕಿದ ಪ್ರಕರಣ ತನಿಖೆ: ಬೆಳ್ತಂಗಡಿ ಠಾಣಾ ಬಳಿ ಎಸ್.ಐ.ಟಿ ಕಚೇರಿ

Suddi Udaya

ಮರೋಡಿ: ಶ್ರೀ ವ್ಯಾಘ್ರ ಚಾಮುಂಡಿ, ಶ್ರೀ ದೈವ, ಶ್ರೀ ಕೊಡಮಣಿತ್ತಾಯ ದೈವಸ್ಥಾನ ಮತ್ತು ಶ್ರೀ ಬ್ರಹ್ಮ ಬೈದರ್ಕಳ ಗರಡಿಗೆ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರಿಂದ ಶಿಲಾನ್ಯಾಸ

Suddi Udaya

ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯಲ್ಲಿ ವೈಭವದ ಸಿರಿಹಬ್ಬ-2026 ಉದ್ಘಾಟನೆ

Suddi Udaya
error: Content is protected !!