ನಾರಾವಿ: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ನಾರಾವಿ ಇಲ್ಲಿ ಜೂನ್ 5ರಂದು ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದಯ ಕುಮಾರ್ ಹೆಗಡೆ ನಾಮನಿರ್ದೇಶದ ಸದಸ್ಯರು ನಾರಾವಿ ಶಾಲೆ ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಭಿಜಿತ್ ಜೈನ್ ಜನ ಸೇವಾ ಟ್ರಸ್ಟ್ ಇವರು ಇಂದಿನ ಕಾಲದಲ್ಲಿ ಪರಿಸರವನ್ನು ಉಳಿಸುವ ಅಗತ್ಯತೆಯ ಮಾಹಿತಿಯನ್ನು ಸವಿವರವಾಗಿ ತಿಳಿಸಿದರು. ಸುಧಾಕರ್ ಭಂಡಾರಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು ಭಾಗವಹಿಸಿ ಪರಿಸರ ದಿನಾಚರಣೆಗೆ ಶುಭ ಕೋರಿದರು. ಪಿಡಿಓ ಸುಧಾಕರ್ ಸಸ್ಯ ಸಂಕುಲ, ಪ್ರಾಣಿ ಸಂಕುಲವನ್ನು ಉಳಿಸುವಲ್ಲಿ ಪರಿಸರದ ಮಹತ್ವವನ್ನು ವಿವರಿಸಿದರು. ಅರಣ್ಯ ಇಲಾಖೆಯ ಅರಣ್ಯ ಪಾಲಕರು ಮಹಾಂತೇಶ್ ಸಸ್ಯಗಳನ್ನು ನೆಡುವುದು ಅಲ್ಲದೆ ಅದನ್ನು ಪೋಷಿಸುವ ಜವಾಬ್ದಾರಿ ಕೂಡ ಅಷ್ಟೇ ಮುಖ್ಯ ಪರಿಸರ ಉಳಿಸಿದರೆ ನಾಡು ಉಳಿಯಬಹುದು ಎಂಬ ಬಗ್ಗೆ ಮಾಹಿತಿ ನೀಡಿದರು.
ಮಂಜುನಾಥ್ ಅರಣ್ಯ ಪಾಲಕರು ಪರಿಸರ ರಕ್ಷಣೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ರೊನಾಲ್ಟ್ ವಾಚರ್ ಪರಿಸರದ ಬಗ್ಗೆ ವಿಶೇಷ ಮಾಹಿತಿ ನೀಡಿದರು. ಪರಿಸರವನ್ನು ರಕ್ಷಿಸುವಲ್ಲಿ ಲೋಕೇಶ್ ಸಾವಯವ ಗೊಬ್ಬರದ ಮಾಹಿತಿಯನ್ನು ನೀಡಿದರು. ಅಲ್ಲದೆ ಗೊಬ್ಬರವನ್ನು ಉಚಿತವಾಗಿ ನೀಡಿ ನೆಟ್ಟಂತಹ ಸಸಿಗಳಿಗೆ ಇಂದು ಹಾಕಲಾಯಿತು. ಸುಶೀಲ ಹೆಗ್ಡೆ ಮುಖ್ಯೋಪಾಧ್ಯಾಯರು ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ನಾರಾವಿ ಇವರು ಸ್ವಾಗತಿಸಿದರು. ಶಾರದಾ ಶಿಕ್ಷಕರು ಬಂದಂತಹ ಅತಿಥಿಗಳಿಗೆ ಧನ್ಯವಾದ ನೀಡಿದರು. ಜ್ಞಾನೇಶ್ವರಿ ಕಾರ್ಯಕ್ರಮ ನಿರೂಪಣೆಗೈದರು.












