ಉಜಿರೆ: ಬೆಳ್ತಂಗಡಿ ರೋಟರಿ ಕ್ಲಬ್ ನ ಸಹಯೋಗದೊಂದಿಗೆ ಸರಕಾರಿ ಪ್ರೌಢ ಶಾಲೆ ಬದನಾಜೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು,
ಜ್ಯೋತಿ ಪ್ರಜ್ವಲನ ಮಾಡಿ ಕಾರ್ಯ ಕ್ರಮ ವನ್ನುಉದ್ಘಾಟಿಸಿ ದ ಬೆಳ್ತಂಗಡಿ ರೋಟರಿ ಕ್ಲಬ್ ನ ಅಧ್ಯಕ್ಷ ರೋ ಶ್ರೀಧರ್ ಕೆ. ವಿ, ಇವರು ,ವಿಧ್ಯಾರ್ಥಿಗಳು ದುಶ್ಚಟದಿಂದ ದೂರ ಇದ್ದು,ಕಲಿಕೆಯ ಕಡೆಗೆ ಗಮನ ಹರಿಸಬೇಕು, ವಿಧ್ಯಾರ್ಥಿ ಜೀವನ ಅಮೂಲ್ಯವಾದುದು, ಈ ಸಂದರ್ಭದಲ್ಲಿ ದೂರ ದೃಷ್ಟಿಯ ಗುರಿಯನ್ನು ಇಟ್ಟುಕೊಂಡು , ಶ್ರದ್ಧೆ, ಮತ್ತು ಏಕಾಗ್ರತೆಯಿಂದ, ನಿರಂತರ ಅಧ್ಯಯನ ಶೀಲರಾಗಬೇಕು, ಈ ಶಾಲೆಯಲ್ಲಿ ಶಿಕ್ಷಣದ ಜೊತೆಗೆ ನಿಮ್ಮ ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಅನೇಕ ಅವಕಾಶಗಳು ಇವೆ, ಆ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು, ಜೀವನದಲ್ಲಿ ಸಾಧನೆ ಮಾಡಿ, ಶಾಲೆಗೂ, ಹೆತ್ತವರಿಗೂ ಕೀರ್ತಿ ತನ್ನಿ ಎಂದು ಶುಭ ಹಾರೈಸಿದರು,
ಸಂಪನ್ಮೂಲ ವ್ಯಕ್ತಿ ರೋ, ಬಿ. ಸೋಮಶೇಖರ ಶೆಟ್ಟಿಯವರು,ದುಶ್ಚಟಗಳ ವಿರುದ್ಧ ಜಾಗೃತಿ, ಸದಾಚಾರಗಳ ಬಗ್ಗೆ ಅರಿವು ಮೂಡಿಸುತ್ತಾ,ಮಾದಕ ದ್ರವ್ಯಗಳ ಸೇವನೆಯ ದುಷ್ಪರಿಣಾಮ, ಆದರ್ಶ ವಿದ್ಯಾರ್ಥಿಗಳಲ್ಲಿ ಇರಬೇಕಾದ ಗುಣ ನಡತೆಗಳು, ಮಾನವೀಯ ಮೌಲ್ಯ, ಭಾರತೀಯ ಪರಂಪರೆಯ ಬಗ್ಗೆ, ಮತ್ತು ಜೀವನ ಮೌಲ್ಯ ಗಳಿಗೆ ಸಂಬಂಧಿಸಿದ ಅನೇಕ ಕತೆಗಳ ಮೂಲಕ, ವಿವರಿಸಿ, ಆದರ್ಶ ವಿದ್ಯಾರ್ಥಿಯಾಗಿ, ದೇಶದ ಸತ್ಪ್ರಜೆಯಾಗಿ ಬಾಳುವಂತೆ ಮಾರ್ಗದರ್ಶನ ನೀಡಿದರು.
ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಜಮುನಾ ಮಾತನಾಡಿ ರೋಟರಿ ಸಂಸ್ಥೆಯ ವತಿಯಿಂದ ಜರುಗಿದ ಸ್ವಾಸ್ಥ್ಯ ಸಂಕಲ್ಪ ಕಾರ್ಯ ಕ್ರಮ, ವಿಧ್ಯಾರ್ಥಿಗಳಿಗೆ ಅವಶ್ಯಕವಾಗಿದ್ದು,ವಿಧ್ಯಾರ್ಥಿಗಳಿಗೆ ಉತ್ತಮ ಮಾರ್ಗ ದರ್ಶನ ನೀಡಿದ ಬಗ್ಗೆ ರೋಟರಿ ಸಂಸ್ಥೆಯನ್ನು ಅಭಿನಂದಿಸಿದರು ಹಾಗೂ ವಿಧ್ಯಾರ್ಥಿಗಳು ಆರೋಗ್ಯ ಪೂರ್ಣ ವ್ಯಕ್ತಿತ್ವ ಬೆಳೆಸಿಕೊಳ್ಳುವಂತೆ ಕರೆ ನೀಡಿದರು.
ಕುಮಾರಿ ವರ್ಷಿತಾ ನಿರೂಪಿಸಿದ ಕಾರ್ಯ ಕ್ರಮದಲ್ಲಿ ಕ್ಲಬ್ ನ ಅಧ್ಯಕ್ಷ ದಯಾಕರ ಸ್ವಾಗತಿಸಿ, ಕಾರ್ಯದರ್ಶಿ ವಂಶಿ ವಂದಿಸಿದರು, ರೋ. ವಿದ್ಯಾಕುಮಾರ್ ಕಾಂಚೋಡು, ಮತ್ತು ಶಾಲೆಯ ಸಹ ಶಿಕ್ಷಕರು ಉಪಸ್ಥಿತರಿದ್ದರು.













