28 C
ಪುತ್ತೂರು, ಬೆಳ್ತಂಗಡಿ
August 11, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ ಶ್ರೀ ಧ.ಮಂ. ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ “ಎಸ್.ಡಿ.ಎಂ. ನೆನಪಿನಂಗಳ”

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ) ಉಜಿರೆ, ಹಿರಿಯ ವಿದ್ಯಾರ್ಥಿ ಸಂಘ (ರಿ.), ಉಜಿರೆ ವತಿಯಿಂದ ಕಾಲೇಜಿನ ಹಿರಿಯ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ “ಎಸ್.ಡಿ.ಎಂ. ನೆನಪಿನಂಗಳ” ವಿದ್ಯಾರ್ಥಿವೇತನ ವಿತರಣೆ, ಮಧ್ಯಾಹ್ನದ ಭೋಜನ ವ್ಯವಸ್ಥೆಗೆ ದೇಣಿಗೆ ಹಸ್ತಾಂತರ, ಹೆಮ್ಮೆಯ ಹಿರಿಯ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವು ಆ. 11ರಂದು ಇಂದ್ರಪ್ರಸ್ಥ ಸಭಾಂಗಣದಲ್ಲಿ ಜರುಗಿತು.

ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪೀತಾಂಬರ ಹೇರಾಜೆ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು.

ವೇದಿಕೆಯಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸತೀಶ್ಚಂದ್ರ ಎಸ್. ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಗುರುನಾಥ್ ಪ್ರಭು, ಕಾರ್ಯದರ್ಶಿ ಬಿಕೆ ಧನಂಜಯ್ ರಾವ್ ಹಾಗೂ ಸನ್ಮಾನ ಸ್ವೀಕರಿಸಿದ ವೈದ್ಯರುಗಳಾದ ಡಾ| ಪ್ರಕಾಶ್ ಬಿ. ಶಕ್ತಿ ಕ್ಲಿನಿಕ್ ಉಜಿರೆ, ಡಾ| ರಾಜಾರಾಮ ಕೆ. ಬಿ. ಗಿರಿಜಾ ಡೆಂಟಲ್ ಕ್ಲಿನಿಕ್ ಉಪ್ಪಿನಂಗಡಿ, ಡಾ| ಎಂ. ಎಂ. ದಯಾಕರ್ ಶ್ರೀ ದಂತ ಚಿಕಿತ್ಸಾಲಯ ಉಜಿರೆ, ಡಾ| ಸದಾನಂದ ಪೂಜಾರಿ ಸೀನಿಯರ್ ಯೂರಾಲಾಜಿಸ್ಟ್ ಮಂಗಳೂರು, ಡಾ| ಶ್ರೀಹರಿ ಅಭಯ ಹಾಸ್ಪಿಟಲ್ ಗುರುವಾಯನಕೆರೆ, ಡಾ| ಪ್ರದೀಪ್ ಆಟಿಕುಕ್ಕೆ ಆರೋಗ್ಯ ಕ್ಲಿನಿಕ್ ನಾವೂರ, ಡಾ। ಶಶಿಕಾಂತ ಡೋಂಗ್ರೆ ಗಣೇಶ್ ಮೆಡಿಕಲ್ ಕೇರ್ ಬೆಳ್ತಂಗಡಿ, ಡಾ| ರಂಜನ್ ಕುಮಾರ್ ಇ.ಎನ್.ಟಿ. ಸ್ಪೆಷಲಿಸ್ಟ್ ಉಜಿರೆ, ಡಾ| ರೇಷ್ಠಾ ಸುನಾ ಡೆಂಟಲ್ ಕೇರ್ ಮೂಡುಬಿದಿರೆ, ಡಾ| ಶ್ರೀಹರ್ಷ ವಿನ್ಯಾಸ ದಂತ ಚಿಕಿತ್ಸಾಲಯ ಉಜಿರೆ ಉಪಸ್ಥಿತರಿದ್ದರು.

ಹಿರಿಯ ವಿದ್ಯಾರ್ಥಿಗಳಿಗೆ ಸನ್ಮಾನ ನಡೆದ ಬಳಿಕ ಅರ್ಹ 20 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ, ಮಧ್ಯಾಹ್ನದ ಭೋಜನ ವ್ಯವಸ್ಥೆಗೆ ದೇಣಿಗೆ ಚೆಕ್ ಹಸ್ತಾಂತರ ನಡೆಯಿತು.
ಶ್ರೀ ಧ.ಮಂ. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಿಶ್ವನಾಥ ಪಿ. ಸ್ವಾಗತಿಸಿದರು. ಡಾ. ದಿವಾಕರ ಕೆ ಹಾಗೂ ದೀಕ್ಷಿತ್ ರೈ ಕಾರ್ಯಕ್ರಮ ನಿರೂಪಿಸಿದರು. ರೋ. ಬಿಕೆ ಧನಂಜಯ್ ರಾವ್ ವಂದಿಸಿದರು.

Related posts

ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನೂತನ ಪಲ್ಲಕ್ಕಿ, ಚಂದ್ರಮಂಡಲ, ಬ್ರಹ್ಮರಥ ನಿರ್ಮಾಣದ ವಿಜ್ಞಾಪನಪತ್ರ ಬಿಡುಗಡೆ ಹಾಗೂ ವೃಕ್ಷ ಮುಹೂರ್ತ ಕಾರ್ಯಕ್ರಮ

Suddi Udaya

ಗರ್ಡಾಡಿ: ಗಾಳಿ ಮಳೆಗೆ ಮನೆಗೆ ಮರ ಬಿದ್ದು ಅಪಾರ ಹಾನಿ

Suddi Udaya

ಗಿರೀಶ್ ಮಟ್ಟಣ್ಣನವರ್ ಆಕ್ಷೇಪಾರ್ಹ ಹೇಳಿಕೆ: ಮೂರು ವಾರಗಳಲ್ಲಿ ತನಿಖೆ ನಡೆಸುವಂತೆ ರಾಜ್ಯ ಮಹಿಳಾ ಆಯೋಗಕ್ಕೆ  ಹೈಕೋರ್ಟ್ ಸೂಚನೆ

Suddi Udaya

ಪಟ್ರಮೆ: ಮೋನಮ್ಮ ನಿಧನ

Suddi Udaya

ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷರಾಗಿ ಅಬ್ದುಲ್ ಹಮೀದ್, ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್ ಆಯ್ಕೆ

Suddi Udaya

ಧರ್ಮಸ್ಥಳ ‘ಶೌರ್ಯ’ ವಿಪತ್ತು ನಿರ್ವಹಣಾ ಕಾರ್ಯಕ್ರಮದ 5ನೇ ವಾರ್ಷಿಕೋತ್ಸವದ ಪ್ರಯುಕ್ತ 91 ತಾಲೂಕು ಸಮಿತಿಗಳ ಸ್ವಯಂ ಸೇವಕರಿಗೆ ತುರ್ತು ಸ್ಪಂದನೆ ಮತ್ತು ಕೌಶಲ್ಯಾಭಿವೃದ್ಧಿ ತರಬೇತಿ

Suddi Udaya
error: Content is protected !!