ಉಜಿರೆ : ಇಲ್ಲಿನ ಎಸ್ ಡಿ ಎಂ ಪದವಿ ಪೂರ್ವ ಕಾಲೇಜಿನಲ್ಲಿ ಕಲಾವಿಭಾಗದ ವ್ಯುತ್ಪತ್ತಿ ಸಂಘದ ವತಿಯಿಂದ ಸದ್ಭಾವನಾ ದಿನಾಚರಣೆ ಯನ್ನು ಸರ್ವಧರ್ಮ ಗಳ ಪ್ರಾರ್ಥನೆ ಹಾಗೂ ಸಂದೇಶಗಳನ್ನು ವಿದ್ಯಾರ್ಥಿಗಳೇ ಪಟಿಸಿ, ಅನುವಾದಿಸಿ ವಿನೂತನವಾಗಿ ಆಚರಿಸಿದರು.

ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್ ಬಿ ಇವರು ವಿದ್ಯಾರ್ಥಿಗಳಿಗೆ ಸದ್ಭಾವನಾ ಪ್ರತಿಜ್ಞೆಯನ್ನು ಭೋಧಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ, ಪ್ರತಿವರ್ಷ ಆ. 20 ರಂದು ಭಾರತದಲ್ಲಿ ಸದ್ಭಾವನಾ ದಿವಸ್ ಅಥವಾ ಸಾಮರಸ್ಯ ದಿನವನ್ನು ಆಚರಿಸಲಾಗುತ್ತದೆ. ಇದು ದೇಶದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜನ್ಮದಿನವಾಗಿದೆ. ಜಾತಿ, ಧರ್ಮ, ಭಾಷೆ ಅಥವಾ ಪ್ರದೇಶಗಳ ಭೇದವಿಲ್ಲದೆ ಎಲ್ಲ ಜನರ ನಡುವೆ ಶಾಂತಿ, ರಾಷ್ಟ್ರೀಯ ಏಕತೆ, ಪ್ರೀತಿ ಮತ್ತು ಸದ್ಭಾವನೆಯನ್ನು ಉತ್ತೇಜಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ. ಹಾಗೂ ವಿದ್ಯಾರ್ಥಿಗಳು ತಮ್ಮ ಜಾತಿ ,ಮತ ,ಭಾಷೆಗಳ ಭೇದಗಳಿದ್ದರೂ ಸ್ನೇಹ ಹಾಗೂ ಸೌಹಾರ್ಧತೆಗಳ ಮೂಲಕ ಒಂದಾಗಿ ಬದುಕಬೇಕು ಎಂಬ ಸಂದೇಶ ನೀಡಿದರು.
ಈ ಸಂಧರ್ಭದಲ್ಲಿ ವಿದ್ಯಾರ್ಥಿಗಳಾದ ಸ್ಮೃತಿ ಹಿಂದೂ ಧರ್ಮದ, ನಿಶಾನ ಇಸ್ಲಾಮ್ ಧರ್ಮದ , ಶ್ರೇಯ ಮರಿಯಾ ಕ್ರೈಸ್ತ ಧರ್ಮದ, ರಾಜ್ ಇಂದ್ರ ಜೈನ ಧರ್ಮದ ಹಾಗೂ ಮನೋಜ್ ಎಂ ಬೌದ್ಧ ಧರ್ಮದ ಸಾಮರಸ್ಯದ ಸಂದೇಶ ಸಾರಿದರು.
ವಿದ್ಯಾರ್ಥಿನಿ ಪ್ರಾರ್ಥನಾ ಸ್ವಾಗತಿಸಿ, ತುಳಸಿ ವಂದಿಸಿದರು ,ಸ್ಪೂರ್ತಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ದಿವ್ಯಾ ಕುಮಾರಿ, ಶ್ಯಾಮಿಲಾ ಹಾಗೂ ಪ್ರೇಕ್ಷಿತಾ ಸಹಕರಿಸಿದರು.











