22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗೇರುಕಟ್ಟೆ: ಯಕ್ಷೋತ್ಸವ ಕಾರ್ಯಕ್ರಮ ಉದ್ಘಾಟನೆ

ಕಳಿಯ: ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು, ಯಕ್ಷಾರಾಧನ ಕಲಾ ಪ್ರತಿಷ್ಠಾನ, ನಾಳ -ಗೇರುಕಟ್ಟೆ ಇದರ ಸಹಯೋಗದೊಂದಿಗೆ ಯಕ್ಷೋತ್ಸವ ಕಾರ್ಯಕ್ರಮ ನ.9ರಂದು ಗೇರುಕಟ್ಟೆ ಮಂಜಲಡ್ಕ ಗಣೇಶೋತ್ಸವ ಸಭಾಭವನದಲ್ಲಿ ನಡೆಯಿತು.

ಶ್ರೀ ಕ್ಷೇತ್ರ ನಾಳದ ಪ್ರಧಾನ ಅರ್ಚಕ ವೇ.ಮೂ.ರಾಘವೇಂದ್ರ ಅಸ್ರಣ್ಣ ಉದ್ಘಾಟಿಸಿ ಶುಭಹಾರೈಸಿದರು.

ವೇದಿಕೆಯಲ್ಲಿ ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಎಂ‌., ಗೇರುಕಟ್ಟೆ ಜ್ಯೋತಿ ಕ್ಲಿನಿಕ್ ನ ವೈದ್ಯ ಅನಂತ್ ಭಟ್, ನಿವೃತ್ತ ರೈಲ್ವೇ ಅಧಿಕಾರಿ ಬೆಂಗಳೂರು ಕೃಷ್ಣ ಕೆ, ಕರ್ನಾಟಕ ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಮತ್ತು ಮಂಗಳೂರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ತಾರಾನಾಥ ಗಟ್ಟಿ ಕಾಪಿಕಾಡು ಉಪಸ್ಥಿತರಿದ್ದರು.

ಪ್ರಮುಖರಾದ ಮಹಾವೀರ್ ಮತ್ತು ವಿಜಯ್ ಕುಮಾರ್ ಇವರನ್ನು ಗೌರವಿಸಲಾಯಿತು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ರಿಜಿಸ್ಟ್ರಾರ್ ನಮ್ರತಾ ಎನ್. ಸ್ವಾಗತಿಸಿದರು. ನಿವೃತ್ತ ಪ್ರಾಂಶುಪಾಲ ದಿವಾಕರ ಆಚಾರ್ಯ ಗೇರುಕಟ್ಟೆ ನಿರೂಪಿಸಿದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸಂಚಾಲಕ ರಾಘವ ಹೆಚ್ ಸಹಕರಿಸಿದರು.

ಯಕ್ಷ ಭಜನೆ:
ಪುಂಜಾಲಕಟ್ಟೆ ಗಣೇಶ್ ಮತ್ತು ತಂಡದಿಂದ ಯಕ್ಷಭಜನೆ ನಡೆಯಿತು. ಭಾಗತರಾಗಿ ಗಣೇಶ್ ಪುಂಜಾಲಕಟ್ಟೆ, ಜಗದೀಶ್ ಚಾರ್ಮಾಡಿ, ಚೆಂಡೆ ಮದ್ದಳೆ ವಿಶ್ವನಾಥ್ ಆಚಾರ್ಯ ವಾಮದಪದವು ಹಾಗೂ ಚಂದ್ರಶೇಖರ್ ಗೇರುಕಟ್ಟೆ ಮುನ್ನಡೆಸಿದರು.

Related posts

ಪಡ್ಡ್ಯಾರಬೆಟ್ಟ ಶ್ರೀ ಕೊಡಮಣಿತ್ತಾಯ ದೈವದ ವರ್ಷಾವಧಿ ಜಾತ್ರಾ ಮಹೋತ್ಸವ: ರಥೋತ್ಸವ, ಕೊಡಮಣಿತ್ತಾಯ ದೈವದ ನೇಮೋತ್ಸವ

Suddi Udaya

ಶಿಶಿಲ ಶಿವ ಸೇವಾ ಟ್ರಸ್ಟ್ ವತಿಯಿಂದ ಹೇವಾಜೆ ಶಾಲೆಯ ಆಯ್ದ ಮಕ್ಕಳಿಗೆ ಉಚಿತ ಬ್ಯಾಗ್, ಪುಸ್ತಕ ಮತ್ತು ಕಲಿಕಾ ಸಾಮಾಗ್ರಿ ವಿತರಣೆ

Suddi Udaya

ಉಜಿರೆ ರುಡ್‌ಸೆಟ್‌ನಲ್ಲಿ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಉದ್ಘಾಟನೆ

Suddi Udaya

ಇಂದಿನಿಂದ ಐಪಿಎಲ್ ಕ್ರಿಕೆಟ್ ಧಮಾಕಾ

Suddi Udaya

ಉಜಿರೆ ಶುಭ ಜ್ಯುವೆಲ್ಲರ್ಸ್ & ವರ್ಕ್ಸ್ ನಲ್ಲಿ “ಶುಭ-ಗೋಲ್ಡ್” ಸ್ಕೀಮ್ ಪ್ರಾರಂಭ: ಸಂಸ್ಥೆಯ ನೂತನ ರಾಯಭಾರಿ ಚಲನಚಿತ್ರ ನಟಿ ಸಿಂಚನ ಪಿ ರಾವ್ ರಿಂದ ಪೋಸ್ಟರ್ ಅನಾವರಣ

Suddi Udaya

ಎಕ್ಸೆಲ್ ಗೆ ಎಸ್ ಡಿ ಎಂ ನ ಎಕ್ಸ್ ಪಿರಿಯ ವಿಜ್ಞಾನ ಮೇಳದಲ್ಲಿ ಚಾಂಪಿಯನ್ ಶಿಪ್

Suddi Udaya
error: Content is protected !!