23.7 C
ಪುತ್ತೂರು, ಬೆಳ್ತಂಗಡಿ
April 24, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಲಾಯಿಲ: ರಸ್ತೆ ಬದಿ ಕಸ ಬಿಸಾಡಿದ್ದಕ್ಕೆ ಮತ್ತೆ ಬಿತ್ತು ದಂಡ

ಬೆಳ್ತಂಗಡಿ: ಕಳೆದ ಎರಡು ದಿನಗಳ ಹಿಂದೆಯಷ್ಟೆ ರಾಶಿ ರಾಶಿ ಕಸ ರಸ್ತೆ ಬದಿ ಸುರಿದು ಹೋದ ಬಗ್ಗೆ ಲಾಯಿಲ ಗ್ರಾಮ ಪಂಚಾಯತ್ ಅಧಿಕಾರಿಗಳು ಬಿಸಾಕಿದವರ ವಿಳಾಸ ಪತ್ತೆ ಹಚ್ಚಿ ಎರಡು ಸಾವಿರ ದಂಡ ವಿಧಿಸಿ ಎಚ್ಚರಿಕೆ ನೀಡಿದ ಮರುದಿನವೇ ಮತ್ತೆ ಅದೇ ಜಾಗದಲ್ಲಿ ಕಸ ಹಾಗೂ ತಿಂದು ಉಳಿದ ಆಹಾರ ಪದಾರ್ಥಗಳನ್ನು ಬಿಸಾಡಿ ಹೋಗಿದ್ದು , ಪರಿಶೀಲಿಸಿದಾಗ ಸ್ಥಳೀಯ ಪ್ಲಾಟ್ ಒಂದರಲ್ಲಿ ವಾಸಿಸುತ್ತಿರುವ ಮನೆಯ ಮಾಹಿತಿ ಸಿಕ್ಕಿದ್ದು , ಈ ಬಗ್ಗೆ ಅವರಿಗೆ ಪಂಚಾಯತ್ ನ ಪಿಡಿಒ ತಾರಾನಾಥ್ ನಾಯ್ಕ, ಹಾಗೂ ಲೆಕ್ಕ ಸಹಾಯಕಿ ಸುಪ್ರಿತಾ ಶೆಟ್ಟಿ ಪೋನ್ ಮಾಡಿದ ವೇಳೆ ಕಸ ಬಿಸಾಡಿರುವುದನ್ನು ಒಪ್ಪಿಕೊಂಡು ಕ್ಷಮೆಯಾಚಿಸಿದ್ದಾರೆ.ಅದಲ್ಲದೇ ಪಂಚಾಯತ್ ವಿಧಿಸಿದ ರೂ.1 ಸಾವಿರ ದಂಡನೆ ಹಣವನ್ನು ಕಟ್ಟಿದ್ದಾರೆ. ಮುಂದೆ ಈ ರೀತಿ ಮಾಡಿದ್ದಲ್ಲಿ ಕಾನೂನು ಕ್ರಮದ ಎಚ್ಚರಿಕೆಯನ್ನು ಪಂಚಾಯತ್ ನೀಡಿದೆ.

Related posts

ಉಜಿರೆ: ಶ್ರೀ ಕಾಲಭೈರವೇಶ್ವರ ಒಕ್ಕಲಿಗ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ (ನಿ.): ಅಧ್ಯಕ್ಷರಾಗಿ ರಂಜನ್ ಜಿ. ಗೌಡ, ಉಪಾಧ್ಯಕ್ಷರಾಗಿ ಶಿವಕಾಂತ ಗೌಡ

Suddi Udaya

ಬೆಳ್ತಂಗಡಿ: ವಿಶೇಷ ವಿಕಲಚೇತನರ ಗುರುತಿನ ಚೀಟಿ ನವೀಕರಣ ಮತ್ತು ಹೊಸ ಗುರುತಿಸುವಿಕೆಯ ಶಿಬಿರ

Suddi Udaya

ಕಳೆ0ಜ :ಆನೆ ದಾಳಿ ಅಡಿಕೆ ಗಿಡ ಮತ್ತು ಬಾಳೆ ಗಿಡ ಸಂಪೂರ್ಣ ನಾಶ

Suddi Udaya

ಪುತ್ತೂರಿನಲ್ಲಿ ಅನಾವರಣಗೊಳ್ಳಲಿರುವ ‘ಲಕ್ಷ್ಯ ಡೇ ಕೇರ್ ಸೆಂಟರ್’ ಹಾಗೂ ‘ಲಕ್ಷ್ಯ ಕೌನ್ಸಲಿಂಗ್ ಸೆಂಟರ್’ಗೆ ಖ್ಯಾತ ಚಲನಚಿತ್ರ ನಟ ರಮೇಶ್ ಅರವಿಂದ್ ಹಾಗೂ ಸಾಹಿತಿ ಯೋಗರಾಜ್ ಭಟ್ ಅವರಿಂದ ಶ್ಲಾಘನೆ

Suddi Udaya

ಶ್ರೀ ಪ್ರಿಯದರ್ಶಿನಿ ಸೌಹಾರ್ದ ಸಹಕಾರಿ ಸಂಘದ ನಿಡ್ಲೆ ಶಾಖೆಯ ಉದ್ಘಾಟನೆ

Suddi Udaya

ಶಿಬಾಜೆಯಲ್ಲಿ ದಲಿತ ಯುವಕನ ಹತ್ಯೆ ಆರೋಪ ಪ್ರಕರಣ: ಆರೋಪಿಗಳನ್ನು ಬಂಧಿಸುವಂತೆ ದಲಿತ ಸಂಘಟನೆಯಿಂದ ಒತ್ತಾಯ

Suddi Udaya
error: Content is protected !!