22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಿಕ್ಷಣ ಸಂಸ್ಥೆ

ಎಸ್ ಡಿ ಎಂ ಪದವಿಪೂರ್ವ ಕಾಲೇಜಿನ 36 ವಿದ್ಯಾರ್ಥಿಗಳಿಗೆ ಸಂಸ್ಕೃತದಲ್ಲಿ ಪೂರ್ಣಾಂಕ

ಉಜಿರೆ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಒಟ್ಟು ಮೂವತ್ತಾರು ವಿದ್ಯಾರ್ಥಿಗಳು ಸಂಸ್ಕೃತ ಭಾಷಾ ಪರೀಕ್ಷೆಯಲ್ಲಿ 100 ಕ್ಕೆ 100 ಅಂಕಗಳಿಸಿ ವಿಶೇಷ ಸಾಧನೆ ಮಾಡಿದ್ದಾರೆ.

ಸಂಸ್ಕೃತ ಭಾಷಾ ಪರೀಕ್ಷೆಯಲ್ಲಿ ಒಟ್ಟು 98 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ಹಾಗೂ 21 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು. ಇವರಲ್ಲಿ ಕಲಾ ವಿಭಾಗದ ನಿಜ ಕುಲಾಲ್ ರಾಜ್ಯಮಟ್ಟದಲ್ಲಿ 4 ನೆಯ ಸ್ಥಾನ ಹಾಗೂ ಶ್ರೀಪೂರ್ಣಾ 9 ನೆಯ ಸ್ಥಾನ , ವಾಣಿಜ್ಯಶಾಸ್ತ್ರ ವಿಭಾಗದ ಹಂಸಿನಿ ಭಿಡೆ 6 ನೆಯ ಸ್ಥಾನ ಪಡೆದಿದ್ದಾರೆ. ಈ ಮೂಲಕ ಸಂಸ್ಕೃತ ಭಾಷಾ ವಿಭಾಗ ಒಟ್ಟಾರೆ 100 ಶೇಕಡಾ ಫಲಿತಾಂಶ ದಾಖಲಿಸಿದೆ.

ವಿಜ್ಞಾನ ವಿಭಾಗದ ಅಮೂಲ್ಯ ಪ್ರಭು, ಅನ್ವಿತಾ ಹೆಬ್ಬಾರ್ , ಆಶೀತ್ ಕುಮಾರ್ , ದಿವ್ಯಾ , ಪಲ್ಲವಿ ಪುರಾಣಿಕ್ , ಪ್ರಯಾಗ ಪುರಾಣಿಕ್ , ಪ್ರಜ್ವಲ್ , ಶ್ರೀವೈಷ್ಣವಿ , ಶ್ರೀಧರ ಎಂ ಹೆಗಡೆ , ಕಾರ್ತಿಕ್ ಡಿ.ಎಂ , ಯಶಸ್ವಿನಿ , ಸಾಹಿತ್ಯ ಎನ್. ಎಸ್ , ಸಮೃದ್ಧಿ , ಭವಿಷ್ , ಪೂರ್ವಿಕಾ ಆರ್ , ಪ್ರಜ್ಞಾ , ಪ್ರೀತಿ ಕೆ. ಜೆ , ಸಂಕೀರ್ತನಾ , ಎಸ್. ಪಿ ಸಾನ್ವಿ , ಮೇಧಾ ಕುಂದಾಡಿ , ನಿಶಾಂತ್ ಹೆಚ್.ಜಿ , ಪ್ರಣೀತಾ ಕೆ.ಪಿ , ವೀಕ್ಷಿತ್ , ಸಿದ್ಧಾಂತ್ ಜೈನ್

ವಾಣಿಜ್ಯಶಾಸ್ತ್ರ ವಿಭಾಗದ ಸಿಂಚನಾ ಶೆಣೈ , ಅನಿಕಾ , ಆದಿತ್ಯ ಹೆಚ್. ಎಸ್ , ಪ್ರಥಮ್ , ಸ್ಪಂದನಾ , ಸಂಜನಾ , ಸುದರ್ಶನ್ , ಸೌಪರ್ಣಿಕಾ ರಾವ್ , ಹಂಸಿನಿ ಭಿಡೆ

ಕಲಾ ವಿಭಾಗದ ನಿಜ ಕುಲಾಲ್ , ಶ್ರೀ ಪೂರ್ಣಾ ಹಾಗೂ ಪ್ರಣವಕೃಷ್ಣ ಇವರು ಸಂಸ್ಕೃತ ಭಾಷಾ ಪರೀಕ್ಷೆಯಲ್ಲಿ 100 ಕ್ಕೆ 100 ಅಂಕ ಪಡೆದು ಕಾಲೇಜಿಗೆ ಹಾಗೂ ಸಂಸ್ಕೃತ ಭಾಷಾ ವಿಭಾಗಕ್ಕೆ ಹೆಮ್ಮೆ ತಂದಿದ್ದಾರೆ.
ಇವರನ್ನು ಆಡಳಿತ ಮಂಡಳಿ , ಪ್ರಾಚಾರ್ಯ ಪ್ರಮೋದ್ ಕುಮಾರ್ ಬಿ ಹಾಗೂ ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನಕುಮಾರ ಐತಾಳ್ ಇವರು ಅಭಿನಂದಿಸಿದ್ದಾರೆ.

Related posts

ಕಲ್ಮಂಜ: ಸಿದ್ದಬೈಲು ಪರಾರಿ ಸ.ಹಿ.ಪ್ರಾ. ಶಾಲೆಯಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ

Suddi Udaya

ಉಜಿರೆ ಎಸ್‌ಡಿಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪೂಲ್ ಕ್ಯಾಂಪಸ್ ಡ್ರೈವ್

Suddi Udaya

ಅರಸಿನಮಕ್ಕಿ ಶ್ರೀ ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೇಸಿಗೆ ಶಿಬಿರ

Suddi Udaya

ಕುರಾಯ ಶ್ರೀ ಸದಾಶಿವ ದೇವರ ಪ್ರತಿಷ್ಠಾ ಮಹೋತ್ಸವ ಮತ್ತು ವಾರ್ಷಿಕ ಜಾತ್ರೋತ್ಸವ:ಗೊನೆ ಮುಹೂರ್ತ, ಧ್ವಜಾರೋಹಣ

Suddi Udaya

ದಸ್ಕತ್ ಗೆ ತುಳುನಾಡಿನ ಕಿರೀಟ: ಈ ವರ್ಷದ ಉತ್ತಮ ತುಳು ಚಲನಚಿತ್ರ ದಸ್ಕತ್

Suddi Udaya

ಬಳಂಜದಲ್ಲಿ ಗುಡ್ಡ ಕುಸಿತ, ಕುಸಿಯುವ ಭೀತಿಯಲ್ಲಿ ಮನೆ

Suddi Udaya
error: Content is protected !!