26.9 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಿಕ್ಷಣ ಸಂಸ್ಥೆ

ಎಸ್ ಡಿ ಎಂ ಪದವಿಪೂರ್ವ ಕಾಲೇಜಿನ 36 ವಿದ್ಯಾರ್ಥಿಗಳಿಗೆ ಸಂಸ್ಕೃತದಲ್ಲಿ ಪೂರ್ಣಾಂಕ

ಉಜಿರೆ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಒಟ್ಟು ಮೂವತ್ತಾರು ವಿದ್ಯಾರ್ಥಿಗಳು ಸಂಸ್ಕೃತ ಭಾಷಾ ಪರೀಕ್ಷೆಯಲ್ಲಿ 100 ಕ್ಕೆ 100 ಅಂಕಗಳಿಸಿ ವಿಶೇಷ ಸಾಧನೆ ಮಾಡಿದ್ದಾರೆ.

ಸಂಸ್ಕೃತ ಭಾಷಾ ಪರೀಕ್ಷೆಯಲ್ಲಿ ಒಟ್ಟು 98 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ಹಾಗೂ 21 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು. ಇವರಲ್ಲಿ ಕಲಾ ವಿಭಾಗದ ನಿಜ ಕುಲಾಲ್ ರಾಜ್ಯಮಟ್ಟದಲ್ಲಿ 4 ನೆಯ ಸ್ಥಾನ ಹಾಗೂ ಶ್ರೀಪೂರ್ಣಾ 9 ನೆಯ ಸ್ಥಾನ , ವಾಣಿಜ್ಯಶಾಸ್ತ್ರ ವಿಭಾಗದ ಹಂಸಿನಿ ಭಿಡೆ 6 ನೆಯ ಸ್ಥಾನ ಪಡೆದಿದ್ದಾರೆ. ಈ ಮೂಲಕ ಸಂಸ್ಕೃತ ಭಾಷಾ ವಿಭಾಗ ಒಟ್ಟಾರೆ 100 ಶೇಕಡಾ ಫಲಿತಾಂಶ ದಾಖಲಿಸಿದೆ.

ವಿಜ್ಞಾನ ವಿಭಾಗದ ಅಮೂಲ್ಯ ಪ್ರಭು, ಅನ್ವಿತಾ ಹೆಬ್ಬಾರ್ , ಆಶೀತ್ ಕುಮಾರ್ , ದಿವ್ಯಾ , ಪಲ್ಲವಿ ಪುರಾಣಿಕ್ , ಪ್ರಯಾಗ ಪುರಾಣಿಕ್ , ಪ್ರಜ್ವಲ್ , ಶ್ರೀವೈಷ್ಣವಿ , ಶ್ರೀಧರ ಎಂ ಹೆಗಡೆ , ಕಾರ್ತಿಕ್ ಡಿ.ಎಂ , ಯಶಸ್ವಿನಿ , ಸಾಹಿತ್ಯ ಎನ್. ಎಸ್ , ಸಮೃದ್ಧಿ , ಭವಿಷ್ , ಪೂರ್ವಿಕಾ ಆರ್ , ಪ್ರಜ್ಞಾ , ಪ್ರೀತಿ ಕೆ. ಜೆ , ಸಂಕೀರ್ತನಾ , ಎಸ್. ಪಿ ಸಾನ್ವಿ , ಮೇಧಾ ಕುಂದಾಡಿ , ನಿಶಾಂತ್ ಹೆಚ್.ಜಿ , ಪ್ರಣೀತಾ ಕೆ.ಪಿ , ವೀಕ್ಷಿತ್ , ಸಿದ್ಧಾಂತ್ ಜೈನ್

ವಾಣಿಜ್ಯಶಾಸ್ತ್ರ ವಿಭಾಗದ ಸಿಂಚನಾ ಶೆಣೈ , ಅನಿಕಾ , ಆದಿತ್ಯ ಹೆಚ್. ಎಸ್ , ಪ್ರಥಮ್ , ಸ್ಪಂದನಾ , ಸಂಜನಾ , ಸುದರ್ಶನ್ , ಸೌಪರ್ಣಿಕಾ ರಾವ್ , ಹಂಸಿನಿ ಭಿಡೆ

ಕಲಾ ವಿಭಾಗದ ನಿಜ ಕುಲಾಲ್ , ಶ್ರೀ ಪೂರ್ಣಾ ಹಾಗೂ ಪ್ರಣವಕೃಷ್ಣ ಇವರು ಸಂಸ್ಕೃತ ಭಾಷಾ ಪರೀಕ್ಷೆಯಲ್ಲಿ 100 ಕ್ಕೆ 100 ಅಂಕ ಪಡೆದು ಕಾಲೇಜಿಗೆ ಹಾಗೂ ಸಂಸ್ಕೃತ ಭಾಷಾ ವಿಭಾಗಕ್ಕೆ ಹೆಮ್ಮೆ ತಂದಿದ್ದಾರೆ.
ಇವರನ್ನು ಆಡಳಿತ ಮಂಡಳಿ , ಪ್ರಾಚಾರ್ಯ ಪ್ರಮೋದ್ ಕುಮಾರ್ ಬಿ ಹಾಗೂ ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನಕುಮಾರ ಐತಾಳ್ ಇವರು ಅಭಿನಂದಿಸಿದ್ದಾರೆ.

Related posts

ಹತ್ಯಡ್ಕ: ನೆಕ್ಕರಡ್ಕ ನಿವಾಸಿ ಅನಸೂಯ ನಿಧನ

Suddi Udaya

ಬೆಳ್ತಂಗಡಿ: ವಿದ್ಯುತ್ ಗುತ್ತಿಗೆದಾರ ಬೆನೆಡಿಕ್ಟ್ ವೇಗಸ್ ನಿಧನ

Suddi Udaya

ಕಳಿಯ ಗ್ರಾ.ಪಂ.ನಲ್ಲಿ ಕಾವಲು ಸಮಿತಿ ಸಭೆ

Suddi Udaya

ಬೆಳ್ತಂಗಡಿ ಮಾರಿಗುಡಿ ದೇವಸ್ಥಾನದ ಪ್ರಧಾನ ಅರ್ಚಕ ಯುವರಾಜ ಹೆಗ್ಡೆ ನಿಧನ

Suddi Udaya

ವಾಲಿಬಾಲ್ ಪಂದ್ಯಾಟ : ಬೆಳ್ತಂಗಡಿ ಶ್ರೀ ಗುರುದೇವ ಪದವಿ ಕಾಲೇಜಿನ ವಿದ್ಯಾರ್ಥಿ ನಿಸಾರ್ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

Suddi Udaya

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ 27ನೇ ಆಲಂಕಾರು ಶಾಖೆ ಉದ್ಘಾಟನೆ

Suddi Udaya
error: Content is protected !!