23.9 C
ಪುತ್ತೂರು, ಬೆಳ್ತಂಗಡಿ
September 2, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗರ್ಡಾಡಿ ಪಲ್ಗುಣಿ ನದಿ ಪರಿಸರದಲ್ಲಿ ನೀರು ನಾಯಿ

ಗರ್ಡಾಡಿ ಗ್ರಾಮದ ಕುಬಳಬೆಟ್ಟು ಗುತ್ತು ಪರಿಸರದ ಪಲ್ಗುಣಿ ನದಿ ತಟದ ಹಳ್ಳದಲ್ಲಿ ಕಳೆದ ಕೆಲವು ದಿನಗಳಿಂದ ನೀರು ನಾಯಿಗಳು ಕಂಡು ಬರುತ್ತಿವೆ.

ಇಲ್ಲಿನ ಕೆ. ಸಂಪತ್ ಕುಮಾರ್ ಕೊಂಬ ಎಂಬವರ ಮನೆಯ ಸಮೀಪ ಕೃಷಿ ತೋಟದಲ್ಲಿ ಹರಿಯುವ ಹಳ್ಳದಲ್ಲಿ ಆಗಾಗ ನೀರು ನಾಯಿಗಳು ಕಂಡು ಬರುತ್ತಿವೆ. ಈ ಹಿಂದಿನ ವರ್ಷಗಳಲ್ಲೂ ಈ ಸ್ಥಳದಲ್ಲಿ ನೀರು ನಾಯಿಗಳು ಕಂಡುಬಂದಿದ್ದವು.
ಸಮೀಪದಲ್ಲಿ ಹರಿಯುವ ಪಲ್ಗುಣಿ ನದಿಯನ್ನು ಸೇರುವ ಈ ಹಳ್ಳದಲ್ಲಿ ಸುಮಾರು ಹತ್ತಕ್ಕಿಂತ ಅಧಿಕ ನೀರು ನಾಯಿ ಮರಿಗಳು ಆಗಾಗ ಆಟ ಆಡುವುದು ಕಂಡುಬರುತ್ತಿದೆ. ಆದರೆ ದೊಡ್ಡ ನೀರು ನಾಯಿಗಳು ಹಳ್ಳದಲ್ಲಿ ಬರುವುದು ತೀರಾ ಅಪರೂಪ. ಪಲ್ಗುಣಿ ನದಿ ತಟದಲ್ಲಿ ಸುಮಾರು 25ಕ್ಕಿಂತ ಅಧಿಕ ನೀರು ನಾಯಿಗಳು ಇರುವ ಶಂಕೆ ವ್ಯಕ್ತವಾಗಿದೆ.

ನೀರು ನಾಯಿ ಸಂತತಿ ಅಳಿವಿನಂಚಿನಲ್ಲಿದೆ. ಪಲ್ಗುಣಿ ನದಿ ಪ್ರದೇಶದ ಕುಬಳಬೆಟ್ಟು ಪರಿಸರದಲ್ಲಿ ಮಾತ್ರ ಹೆಚ್ಚಾಗಿ ಇವು ಕಂಡುಬರುತ್ತಿವೆ.

ಪಲ್ಗುಣಿ ನದಿ ಪ್ರದೇಶದ ಈ ಪರಿಸರದಲ್ಲಿ ಜನರು ಪ್ರಸ್ತುತ ನದಿಯತ್ತ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಈ ಬಾರಿ ಮಳೆ ಪ್ರಮಾಣ ತೀವ್ರ ಕಡಿಮೆ ಇದ್ದು ನದಿಯಲ್ಲಿ ನೀರಿನ ಹರಿವು ಕಡಿಮೆ ಇದೆ. ಈ ಕಾರಣದಿಂದ ನೀರು ನಾಯಿಗಳು ಆಗಾಗ ಆಹಾರ ಅರಸಿಕೊಂಡು ಹಳ್ಳದತ್ತ ಬರುತ್ತಿವೆ.

Related posts

ನಡ ಸ.ಪ.ಪೂ. ಕಾಲೇಜಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ “ರಾಷ್ಟ್ರಪತಿ ಪದಕ” ಪುರಸ್ಕೃತ ವೀರಯೋಧ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಗೆ ನುಡಿನಮನ

Suddi Udaya

ಧರ್ಮಸ್ಥಳ: ಶ್ರೀ ಧ.ಮಂ. ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ

Suddi Udaya

ತೆಕ್ಕಾರು: ಬಾಜಾರು ಓಂ ರಾಮ್ ಫ್ರೆಂಡ್ಸ್ ಆಶ್ರಯದಲ್ಲಿ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ

Suddi Udaya

ಗುರುವಾಯನಕೆರೆ: ಸುಪ್ರಿಂ ಎಲೆಕ್ಟ್ರಾನಿಕ್ ನಲ್ಲಿ ದೀಪಾವಳಿ ಪ್ರಯುಕ್ತ ಭರ್ಜರಿ ಡಿಸ್ಕೌಂಟ್ ಸೇಲ್

Suddi Udaya

ಬೆಳಾಲು ಗ್ರಾ. ಪಂ. ಬಿಲ್ಲು ವಸೂಲಿಗಾರ ಶಶಿಧರ್ ಕರ್ತವ್ಯದಿಂದ ಅಮಾನತು

Suddi Udaya

ಥಾಮಸ್ ಕಪ್ ವಿಜೇತ ಹಾಗೂ ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತ ಆಯುಷ್ ಶೆಟ್ಟಿ ಧರ್ಮಸ್ಥಳಕ್ಕೆ ಭೇಟಿ

Suddi Udaya
error: Content is protected !!