22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಕನ್ಯಾಡಿ 2 ಸ.ಉ.ಹಿ.ಪ್ರಾ. ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಧರ್ಮಸ್ಥಳ : ‘ವಿಜ್ಞಾನ ಜ್ಞಾನ ಕೊಡುತ್ತದೆ. ಪ್ರಬುದ್ಧತೆ ಜೀವನ ಕಟ್ಟಿಕೊಡುತ್ತದೆ’ ಎಂಬ ಮಾತನ್ನು ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರು ಮತ್ತು ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪಿ ಶ್ರೀನಿವಾಸ್ ರಾವ್ ಇವರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕನ್ಯಾಡಿ 2 ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಯನ್ನು ತಮ್ಮ ಶುಭನುಡಿಯೊಂದಿಗೆ ಮತ್ತು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ನಂದ ಕೆ ಇವರು ಜೊತೆಯಾಗಿ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.

ನೊಬೆಲ್ ಪುರಸ್ಕೃತ ಸರ್ ಸಿ ವಿ. ರಾಮನ್ ಅವರ ಜನ್ಮ ದಿನಾಚರಣೆಯನ್ನು ರಾಷ್ಟ್ರೀಯ ವಿಜ್ಞಾನ ದಿನವಾಗಿ ಆಚರಿಸುತ್ತಿದ್ದೇವೆ. ಈ ಪ್ರಯುಕ್ತ ಶಾಲೆಯಲ್ಲಿ ಶಾಲಾ ಮಕ್ಕಳು ತಮ್ಮ ಪ್ರತಿಭೆಯನ್ನು ವಿಭಿನ್ನವಾದ ಪ್ರಯೋಗದ ಮಾದರಿಗಳನ್ನು ತಯಾರಿಸುವ ಮೂಲಕ ಪ್ರಾಯೋಗಿಕವಾಗಿ ಪ್ರದರ್ಶನ ಮಾಡಿ ಮಾಹಿತಿಯನ್ನು ನೀಡಿದರು. ನೀರಿನ ಶುದ್ದೀಕರಣ ಘಟಕದ ಮಾದರಿ, ರಿಮೋಟ್ ಕಾರ್, ಡ್ರಿಲ್ಲಿಂಗ್ ಮಿಷನ್, ಜ್ವಾಲಾಮುಖಿಯ ಪ್ರಯೋಗ, ನ್ಯೂಟನ್ ಚಕ್ರ, ವ್ಯಾಕ್ಯೂಮ್ ಕ್ಲೀನರ್, ಸರಕು ಸಾಗಣೆಯ ಹಡಗು, ಶ್ರೀ ಡಿ ಹೋಲೋಗ್ರಾಮ್.ಆಮ್ಲ-ಪ್ರತ್ಯಾಮ್ಲದ ಪ್ರಯೋಗಗಳು, ನೀರಿನಲ್ಲಿ ವಿದ್ಯುತ್ ಹರಿಯುವಿಕೆ, ಗಾಳಿಗೆ ತೂಕವಿದೆ, ಮಾಡರ್ನ್ ಸಿಟಿ ಮುಂತಾದ ಹಲವು ಪ್ರಯೋಗಗಳನ್ನು ಶಿಕ್ಷಕರ ಮಾರ್ಗದರ್ಶನದ ಮೂಲಕ ಮಕ್ಕಳು ತಯಾರಿಸಿದರು.

ಈ ವಿಶೇಷ ಕಾರ್ಯಕ್ರಮದಲ್ಲಿ ಮಕ್ಕಳನ್ನು ಪ್ರೋತ್ಸಾಹಿಸಿ ಹುರಿದುಂಬಿಸಲು ಧರ್ಮಸ್ಥಳ ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್ ಸುವರ್ಣ, ಶ್ರೀಮತಿ ಭಾರತಿ, ವಸಂತ ನಾಯ್ಕ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಿನೇಶ್, ಪಂಚಾಯತ್ ಸಿಬ್ಬಂದಿ ದೇವಿಪ್ರಸಾದ್ ಬೊಳ್ಮಾ, ಗೌರವ ಸಲಹೆಗಾರರಾದ ರಾಜೇಂದ್ರ ಅಜ್ರಿ, ಧರ್ಮಸ್ಥಳ ಕೃಷಿಪತ್ತಿನ ಸಹಕಾರಿ ಸಂಘದ ನಿರ್ದೇಶಕರು ಮತ್ತು ಗೌರವ ಸಲಹೆಗಾರರಾದ ನೀಲಕಂಠ ಶೆಟ್ಟಿ, ಎಸ್‌ಡಿಎಂಸಿ ಸದಸ್ಯರು, ಪೋಷಕರು, ಎಸ್‌ಡಿಎಂ ಕಾಲೇಜಿನ ಎಂ ಎಸ್ ಡಬ್ಲ್ಯೂ ವಿದ್ಯಾರ್ಥಿಗಳು, ಶಿಕ್ಷಕ ಬೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕರು ಶ್ರೀಮತಿ ಪುಷ್ಪಾ ಎನ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.

Related posts

ಕಲ್ಮಂಜ: ಕೃಷಿಕ ಶೀನ ಶೆಟ್ಟಿ ನಿಧನ

Suddi Udaya

ಮರೋಡಿ: ಕೃಷಿಕ ಚೀಂಕ್ರ ಪೂಜಾರಿ ನಿಧನ

Suddi Udaya

ಹಿಂದೂ ಸಂಗಮ ಆಯೋಜನಾ ಸಮಿತಿ ಬಳಂಜ ಮಂಡಲದಿಂದ “ಹಿಂದೂ ಸಂಗಮ” ಕಾರ್ಯಕ್ರಮ

Suddi Udaya

ನಾವೂರು ದುರ್ಗಾ ಮೇಲೋಡಿಸ್ 100ನೇ ಸಂಚಿಕೆಯ ಆಮಂತ್ರಣ ಪತ್ರಿಕೆ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ಬಿಡುಗಡೆ

Suddi Udaya

ಸುದ್ದಿಉದಯ ವಾರಪತ್ರಿಕೆಯ ದೀಪಾವಳಿ ವಿಶೇಷಾಂಕ, ಹೇ ಶಾರದೇ, ಕೃಷ್ಣ ವೇಷ ಸ್ಪರ್ಧೆಗಳ ಬಹುಮಾನ ವಿತರಣೆ

Suddi Udaya

ಗೌಡರ ಯಾನೆ ಒಕ್ಕಲಿಗ ಗ್ರಾಮ ಸಮಿತಿ ಹಾಗೂ ಶಿಶಿಲ ಗ್ರಾಮದ ಬೈಲುವಾರು ಸಮಿತಿಯ ಪದಾಧಿಕಾರಿಗಳ ಸಭೆ

Suddi Udaya
error: Content is protected !!